Posts

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಅಮೆರಿಕಾದ 46ನೇ ಅಧ್ಯಕ್ಷರನ್ನು ಆಯ್ಕೆ ಮಾಡಲೆಂದು 2020ರ ನವೆಂಬರ್ ತಿಂಗಳಲ್ಲಿ ನಡೆಯುವ ಯುಎಸ್ ಅಧ್ಯಕ್ಷೀಯ ಚುನಾವಣಾ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ರಿಪಬ್ಲಿಕನ್ ಪಕ್ಷದ ವತಿಯಿಂದ (ಗ್ರ್ಯಾಂಡ್ ಓಲ್ಡ್ ಪಾರ್ಟಿ ಅಥವಾ ಗೋಪಿ) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ವಿವಿಧ ರಾಜ್ಯದ ಪ್ರಾಥಮಿಕ ಮತ್ತು ಕಾಕಸ್‌ಗಳಲ್ಲಿ 1,099 ಪ್ರತಿನಿಧಿಗಳನ್ನು ಗೆದ್ದಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗೆಲ್ಲಲು ಅವರಿಗೆ ಒಟ್ಟು 1,276 ಪ್ರತಿನಿಧಿಗಳು ಬೇಕಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಮತ್ತು ವರ್ಮೊಂಟ್ ಸೆನೆಟರ್ ಬರ್ನಿ ಸ್ಯಾಂಡರ್ಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. "ಸೂಪರ್ ಟೂಸ್ಡೆ” ಕೆಲವು ಪ್ರಮುಖ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಚುನಾವಣೆಯನ್ನು ಗೆದ್ದಿರುವ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ. ಹದಿನಾಲ್ಕು ರಾಜ್ಯಗಳು ಮತ್ತು ಅಮೇರಿಕನ್ ಸಮೋವಾಗಳಲ್ಲಿ ಕಳೆದ ಮಂಗಳವಾರ ಅಧ್ಯಕ್ಷೀಯ ಪ್ರಾಥಮಿಕ ಚುನಾವಣೆ ನಡೆಯಿತು. ಸ್ಪರ್ಧೆಗಳು 1,344 ರಾಷ್ಟ್ರೀಯ ವಾಗ್ದಾನ ಮಾಡಿದ ಪ್ರತಿನಿಧಿಗಳಿಗೆ ಪೂರಕವಾಗಿವೆ. 2020ರ ಡೆಮಾಕ್ರಟಿಕ್ ಪಕ್ಷದ ಸ್ಪರ್ಧೆಯಲ್ಲಿ ಲಭ್ಯವಿರುವ ಒಟ್ಟು ಮೊತ್ತದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿದೆ. ಬಹುಪಾಲು ಪ್ರತಿನಿಧಿಗಳನ್ನು ಗೆಲ್ಲುವ ಅಭ್ಯರ್ಥಿಯನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ...

ತೈಲ ಬೆಲೆ ಸಮರ

ಸೌದಿ ಅರೇಬಿಯಾವು ‘ಬ್ರೆಂಟ್’ ಕಚ್ಚಾ ತೈಲ ಬೆಲೆಗಳನ್ನು ಶೇಕಡಾ 30ಕ್ಕಿಂತಲೂ ಕಡಿಮೆಗೊಳಿಸುವುದರೊಂದಿಗೆ ತೈಲ ಬೆಲೆ ಸಮರ ಪ್ರಾರಂಭವಾಗಿದೆ. 1991ರ ಕೊಲ್ಲಿ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಈ ಮಟ್ಟಿಗೆ ಬೆಲೆಗಳ ಕಡಿತವಾಗಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ಒಡಕನಿಂದ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ನಿರ್ಧಾರ ಮಾಡಲಾಗಿದೆ. ಕರೋನಾ ವೈರಸ್ ಹೊಡೆತಕ್ಕೆ ಏಕಾಏಕಿ ಬೆಲೆ ಕುಸಿತವಾಗಿದ್ದು ಸೌದಿ ಅರೇಬಿಯಾ ನೇತೃತ್ವದ ತೈಲ ಕಾರ್ಟೆಲ್ ಒಪೆಕ್ (ಆರ್ಗನೈಸೇಶನ್ ಆಫ್ ಪೆಟ್ರೋಲಿಯಂ ರಫ್ತು ದೇಶಗಳ ರಾಷ್ಟ್ರ) ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಮೊಟಕುಗೊಳಿಸಲು ಬಯಸಿದೆ. ಆದಾಗ್ಯೂ, ರಷ್ಯಾ ತನ್ನ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪದೇ ಇರುವ ಕಾರಣದಿಂದ ಸೌದಿ ಅರೇಬಿಯಾದ ತೈಲ ಕಂಪನಿ ಬ್ರೆಂಟ್ ಈ ಶತಮಾನದಲ್ಲಿ ಅತ್ಯಂತ ಕಡಿಮೆ ಬೆಲೆಯನ್ನು ಘೋಷಿಸುವ ಮೂಲಕ ಬೆಲೆ ಸಮರವನ್ನು ಸಾರಿದೆ. ಹಣಕಾಸು ಮಾರುಕಟ್ಟೆಗಳು ಮತ್ತು ನೈಜ ವಲಯವು ಏಕಾಏಕಿ‌ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿದೆ, ವಿಶೇಷವಾಗಿ ಇಂಧನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ. ಯಾವುದೇ ದೇಶವು ಸೌದಿ ಅರೇಬಿಯಾದಷ್ಟು ಅಗ್ಗವಾಗಿ ತೈಲವನ್ನು ಉತ್ಪಾದಿಸಲು ಸಾಧ್ಯವಿಲ್ಲ. "ಹಣಕಾಸಿನ ವಿರಾಮ-ಸಹ" ತೈಲ ಬೆಲೆಗಳು ಎಲ್ಲಾ ಆಟಗಾರರಿಗೆ ಒಂದೇ ರೀತಿ‌ ಇರುವುದಿಲ್ಲ. ತೈಲ ಉತ್ಪಾದಕರು ತಮ್ಮ ತೈಲ ಉತ್ಪಾದನೆಯನ್ನು ಯಾವ ಮಟ್ಟದಲ್ಲಿ ಇಳಿಸುತ್ತಾರೆ ಮತ್ತು ರ...

ಕೊರಿಯನ್ ಪೆನಿನ್ಸುಲಾದಲ್ಲಿ ಹೆಚ್ಚುತ್ತಿರುವ ಒತ್ತಡ

ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಕನಿಷ್ಠ ಮೂರು ಗುರುತಿಸಲಾಗದ ಸ್ಪೋಟಕಗಳನ್ನು ಹಾರಿಸಿದೆ. ಇದು ಕಳೆದೆರಡು ವಾರದಲ್ಲಿ ಕಿಮ್ ಜೊಂಗ್-ಉನ್ ಆಡಳಿತದ ಎರಡನೇ ಕ್ರಮ. ಪಿಯೋಂಗ್ಯಾಂಗ್ ತನ್ನ ಹಿಂದಿನ ಲೈವ್-ಫೈರ್ ವ್ಯಾಯಾಮಗಳನ್ನು ಖಂಡಿಸಿ "ಮಹತ್ವದ" ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ ಎರಡು ದಿನಗಳ ನಂತರ ಇದು ಘಟಿಸಿದೆ. ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯವು ಉತ್ತರ ಕೊರಿಯಾದ ಪೂರ್ವ ಕರಾವಳಿಯಿಂದ ಕೊರಿಯಾದ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ನೀರಿನಲ್ಲಿ ಹಾರಿಸಿದ ವಿವಿಧ ರೀತಿಯ ಅಲ್ಪ-ಶ್ರೇಣಿಯ ಸ್ಪೋಟಕಗಳನ್ನು ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ‌. ಸ್ಪೋಟಕದ ತೀವ್ರತೆ ಗರಿಷ್ಠ 200 ಕಿ.ಮೀ. ಇತ್ತು ಮತ್ತು ಉಡಾವಣೆ ತೀವ್ರತೆ ಗರಿಷ್ಠ 50 ಕಿ.ಮೀ. ಇತ್ತು. ಮಿಲಿಟರಿ ಸಂಬಂಧಿತ ಚಲನೆಯನ್ನು ಮೇಲ್ವಿಚಾರಣೆ ನಡೆಸಿ ಸಂಪೂರ್ಣವಾಗಿ ಉಡಾವಣೆ ಮಾಡುವ ಸಂದರ್ಭದಲ್ಲಿ ಇದು ಘಟಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ 2018ರಲ್ಲಿ ಉತ್ತರ ಕೊರಿಯಾದೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಈ ಉಡಾವಣೆಗಳು ಉಲ್ಲಂಘಿಸಿವೆ ಎಂದು ಅದು ಹೇಳಿದೆ. ಫೆಬ್ರವರಿ 28ರಂದು ಹನೋಯಿಯಲ್ಲಿ ನಡೆದ ಕಿಮ್ಸ್ ಶೃಂಗಸಭೆಯ ಒಂದನೇ ವಾರ್ಷಿಕೋತ್ಸವದಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸೇನೆಗೆ ಸಂಬಂಧಿಸಿದ ಚರ್ಚೆ ನಡೆಸಲಾಯಿತು ಎಂದು ಉತ್ತ...

ಭಯೋತ್ಪಾದನೆ ಬಗೆಗಿನ ಪಾಕಿಸ್ತಾನದ ದ್ವಿಮುಖ ನೀತಿ ಬಹಿರಂಗ

Image
ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ಜೊತೆ ವ್ಯವಹರ ನಡೆಸುತ್ತಿರುವ ಪಾಕಿಸ್ತಾನ ಸರ್ಕಾರದ ದ್ವಂದ್ವ ನಿಲುವು ಎಲ್ಲರಿಗೂ ಗೊತ್ತಿರುವ ವಿಷಯ‌. ಪ್ಯಾರಿಸ್ ನ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಸಮಾವೇಶಕ್ಕೂ‌ ಮೊದಲು ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಬಗ್ಗೆ ಸಂಪೂರ್ಣವಾಗಿ ಸುಳ್ಳು ಹೇಳಿರುವುದರಿಂದ ಅದರ ನಿಲುವು ಮತ್ತೊಮ್ಮೆ ಬಹಿರಂಗವಾಗಿದೆ‌. ಭಯೋತ್ಪಾದನಾ‌ ಕೃತ್ಯದ ಮಾಸ್ಟರ್-ಮೈಂಡ್ ಪಾಕಿಸ್ತಾನದಲ್ಲಿ ಅಧಿಕೃತವಾಗಿ ರಕ್ಷಣೆ ಪಡೆದುಕೊಂಡಿದ್ದಾನೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಜಗತ್ತಿಗೆ ತೋರಿಸಲು ಇಸ್ಲಾಮಾಬಾದ್ ಪ್ರಯತ್ನಿಸುತ್ತಿದೆ; ಆದರೆ ವಾಸ್ತವದಲ್ಲಿ ಇದು ಮಸೂದ್ ಅಜರ್, ಹಫೀಜ್ ಮೊಹಮ್ಮದ್ ಸಯೀದ್, ಝಾಕಿರ್ ಉರ್ ರೆಹಮಾನ್ ಲಖ್ವಿ ಮತ್ತು ಜಾಗತಿಕವಾಗಿ ಭಯೋತ್ಪಾದಕ ದಾಳಿಗೆ ಕಾರಣರಾದ ಅನೇಕ ಭಯೋತ್ಪಾದಕರನ್ನು ವಿಚಾರಣೆ ಮಾಡಿ ಸೂಕ್ತ ದಂಡ ವಿಧಿಸುತ್ತಿಲ್ಲ‌. ಮಸೂದ್ ಅಜರ್ ಜೈಶ್-ಎ-ಮೊಹಮ್ಮದ್ (ಜೆಎಎಂ) ಮುಖ್ಯಸ್ಥನಾಗಿದ್ದು 2019ರ ಫೆಬ್ರವರಿ 14ರಂದು ನಡೆದ ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪದನಾ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. ಈ ದಾಳಿಯಲ್ಲಿ ಭಾರತದ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಸೈನಿಕರು ಕೊಲ್ಲಲ್ಪಟ್ಟಿದ್ದರು. 2019ರ ಫೆಬ್ರವರಿ 26ರಂದು ಭಾರತವು ಬಾಲಕೋಟ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನದ ಜೈಶ್-ಎ-ಮೊಹಮ...

ಕಾಬೂಲ್ ವಿಷಯಗಳಲ್ಲಿ ಅನಿಶ್ಚಿತತೆ

Image
ಅಫ್ಘಾನಿ‌ಸ್ತಾನದಲ್ಲಿ ಮಾರ್ಚ್ ಆರಂಭ ಆಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗಿವೆ. ಫೆಬ್ರವರಿ 29ರಂದು ಯುಎಸ್-ತಾಲಿಬಾನ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಯುದ್ಧದಿಂದ ಹಾನಿಯಾದ ದೇಶಕ್ಕೆ ಬಹಳ ಅಗತ್ಯವಾಗಿ ಬೇಕಾಗಿರುವ ಶಾಂತಿಯ ಪುನರ್ ಸ್ಥಾಪನೆಗಾಗಿ ಇಂಟ್ರಾ ಅಫ್ಘಾನ್ ಸಂವಾದವನ್ನು ನಡೆಸಲು; ಉಗ್ರಗಾಮಿ ನಿಲುವನ್ನು ಪ್ರತಿನಿಧಿಸುವ ತಾಲಿಬಾನ್ ಮತ್ತು ಶಾಂತಿಪ್ರಿಯ‌ ಜನರ ನಡುವೆ ಸಂವಾದ ಏರ್ಪಾಟಾಗುವಂತೆ ಮಾಡಲು ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರ ಮುಂದಡಿ ಇಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈ ನಡುವೆ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಇದು ಅಫ್ಘಾನಿಸ್ತಾನದ ಜನರಲ್ಲಿ ಮಾತ್ರವಲ್ಲದೆ ಪ್ರಸ್ತುತ ಕಾಬೂಲ್‌ನಲ್ಲಿ ಆಳ್ವಿಕೆ ನಡೆಸುತ್ತಿರುವವರ ರಾಜಕೀಯ ಕಿತ್ತಾಟವನ್ನು ಶಾಂತಯುತವಾಗಿ ಇತ್ಯರ್ಥ ಮಾಡಲು ಪರಿಹಾರ ಹುಡುಕುತ್ತಿರುವ ಬಾಹ್ಯ ಶಕ್ತಿಗಳಿಗೂ ನಿರಾಶೆ ಮೂಡಿಸಿದೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶ್ರಫ್ ಘನಿ ಮತ್ತೆ ಜಯಗಳಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ. ಆದರೂ ಅಶ್ರಫ್ ಘಾನಿ ಅವರನ್ನು ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಡಿ. ಅಬ್ದುಲ್ಲಾ ಅಬ್ದುಲ್ಲಾ ನೇತೃತ್ವದ ಮತ್ತೊಂದು ಪ್ರಬಲ ಬಣದ ವಿರುದ್ಧ ಸ್ಪರ್ಧಿಸಿ ಗೆದ್ದ ಬಳಕವೇ. ಅಶ್ರಫ್ ಘಾನಿ...

ವಿದೇಶಿ ನೀತಿಯೊಂದಿಗೆ ಭಾರತೀಯ ಸಿನರ್ಜೀಸ್ ವ್ಯವಹಾರ

ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಸರ್ಕಾರದ ವಿದೇಶಾಂಗ ನೀತಿಯಲ್ಲಿ ಬಿ 2 ಬಿ (ಬಿಸಿನೆಸ್ ಟು ಬ್ಯುಸಿನೆಸ್) ಸಹಭಾಗಿತ್ವದ ಕೇಂದ್ರೀಕೃತವಾಗಿದೆ. ಅವುಗಳಲ್ಲಿ ಗಮನಾರ್ಹವಾದ ಸಂಗತಿ ಎಂದರೆ ಮೃದುವಾದ ಬಡ್ಡಿದರಗಳನ್ನು ಹೊಂದಿರುವ ಪಾಲುದಾರ ರಾಷ್ಟ್ರಗಳಿಗೆ ಭಾರತವು ಲೈನ್ಸ್ ಆಫ್ ಕ್ರೆಡಿಟ್ (ಎಲ್‌ಓಸಿ) ಅನ್ನು ವಿಸ್ತರಿಸಿದೆ. ಇವುಗಳ ಪ್ರಮಾಣ ಮತ್ತು ಸಂಕೀರ್ಣತೆಯ ವ್ಯಾಪ್ತಿ ಕಳೆದ‌ ಕೆಲ ವರ್ಷಗಳಿಂದ ನೂರಾರು ಸಂಖ್ಯೆಯಲ್ಲಿ ಬೆಳೆದಿವೆ. ಅವುಗಳ ಉದ್ದೇಶವು ವಿದೇಶದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವುದರಿಂದ ಹಿಡಿದು ಸೇವೆಗಳನ್ನು ವಿಸ್ತರಿಸುವ ಮತ್ತು ಉತ್ಪನ್ನಗಳನ್ನು ಪೂರೈಸುವವರೆಗೆ ಇರುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ವ್ಯವಹಾರ ಶೃಂಗಸಭೆಯಲ್ಲಿ ಈ ತೆರನಾದ ಭಾರತದ ವ್ಯವಹಾರ-ರೀತಿಯ ರಾಜತಾಂತ್ರಿಕ ವಿಧಾನಗಳ ಬಗ್ಗೆ ತಿಳಿಸಿದರು‌. ಯಾವುದೇ ಸಾಲದ ಸಾಲಿನಲ್ಲಿ 65% ರಿಂದ 75% ರಷ್ಟು ಭಾರತದ ಪಾಲಾಗಿರುತ್ತದೆ ಎಂಬುದು ಎಲ್‌ಒಸಿಗಳಲ್ಲಿ ಕಂಡುಬರುವ ಸಾಮಾನ್ಯ ಸಂಗತಿ. ಪ್ರತಿಯೊಂದು ಕೂಡ ತಮ್ಮದೇ ಆದ ರೀತಿಯಲ್ಲಿ ನಮ್ಮ ಕಂಪನಿಗಳಿಗೆ ವಿದೇಶೀ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತವೆ. ಕ್ರೆಡಿಟ್ ಲೈನ್ಸ್ ಪೂರ್ಣ ಪ್ರಮಾಣದ ಗ್ಯಾರಂಟಿ ಹೊಂದಿರುವುದರಿಂದ ಇದು ಭಾರತೀಯ ಕಂಪನಿಗಳಿಗೆ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ, ಸಾಮಾನ್ಯವಾಗಿ ಅವುಗಳಿಂದ...

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ

ಬೀಜಿಂಗ್‌ ಪಾಲಿಗೆ ನಿರ್ಣಾಯಕವಾಗಿರುವ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಒಪ್ಪಂದ ಯಾವಾಗ ಪೂರ್ಣಗೊಳ್ಳಬಹುದು ಎಂಬ ಬಗ್ಗೆ ಸ್ವಲ್ಪ ಸಂದೇಹವಿದೆ. ಏಕೆಂದರೆ ಸಿಪಿಇಸಿಯಿಂದ ಚೀನಾಕ್ಕೆ ಬಹಳ ಮುಖ್ಯವಾಗಿ ಗಲ್ಫ್ ಮತ್ತು ಹಿಂದೂ ಮಹಾಸಾಗರದ ಮುಖಾಂತರ 62 ಬಿಲಿಯನ್ ಡಾಲರ್ ಯೋಜನೆ ಸುಲಭವಾಗಿ ಬರಲಿದೆ. ಅಲ್ಲದೆ ಇದು ಚೀನಾದ ಭೂಭಾಗದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರಾಂತ್ಯವನ್ನು ಬಲೂಚಿಸ್ತಾನದ ಗ್ವಾಡರ್ ಬಂದರಿನೊಂದಿಗೆ ಸಂಪರ್ಕಿಸುತ್ತದೆ. ಆದರೆ ನಿಖರವಾಗಿ ಪಾಕಿಸ್ತಾನ ಎಲ್ಲಿ ನಿಂತಿದೆ? ಎಂಬುದು ಅನೇಕ ರಾಜಕೀಯ ವಿಶ್ಲೇಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಪಾಕಿಸ್ತಾನದ ವಿಮರ್ಶಕರು ಕೂಡ ಕೆಲ ಸಂದರ್ಭಗಳಲ್ಲಿ ಈ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಿಪಿಇಸಿ ಮಾತ್ರವಲ್ಲದೆ ಇದಕ್ಕೆ ಪೂರಕವಾಗಿರುವ ಇನ್ನೂ ಕೆಲ ಯೋಜನೆಗಳ ವೆಚ್ಚವು ಹೆಚ್ಚಾಗುತ್ತಿದ್ದು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇವುಗಳ ಪೈಕಿ ಮೆಗಾ ಹೈಡಲ್ ವಿದ್ಯುತ್ ಯೋಜನೆ ಮತ್ತು ಪೇಶಾವರವನ್ನು ಕರಾಚಿಯೊಂದಿಗೆ ಸಂಪರ್ಕಿಸುವ ಬಹಳ ಮಹತ್ವಾಕಾಂಕ್ಷೆಯ ರೈಲ್ವೆ ಮಾರ್ಗ ಕೂಡ ಸೇರಿದೆ. ಈ ರೈಲ್ವೆ ಮಾರ್ಗದ ಯೋಜನೆಗೆ ಆರಂಭದಲ್ಲಿ 8.2 ಬಿಲಿಯನ್ ಡಾಲರ್ ಖರ್ಚಾಗಬಹುದೆಂದು ಎಂದು ಅಂದಾಜು ಮಾಡಲಾಗಿತ್ತು. ಬಳಿಕ ಇದನ್ನು 6.2 ಬಿಲಿಯನ್ ಡಾಲರ್ ಗೆ ಇಳಿಸಲಾಯಿತು. ಕೆಲವು ಅಡಚಣೆಗಳಿಂದಾಗಿ ಯೋಜನಾ ವೆಚ್ಚದಲ್ಲಿ ಎರಡು ಬಿಲಿಯನ್ ಡಾಲರ್ ಗಳನ್ನು ಕಡಿಮೆ‌ ಮಾಡಬೇಕಾಯಿತು. ಆ...