Posts

Showing posts from January, 2020

ಟ್ರಂಪ್‌ ಅವರ ಟು ನೇಷನ್‌ ಪ್ಲಾನ್‌

ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಬಳಿಕ ಇಸ್ರೇಲ್-ಪ್ಯಾಲೇಸ್ಟಿನಿಯನ್ ಸಂಘರ್ಷಕ್ಕೆ ಶಾಂತಿ ಯೋಜನೆಯನ್ನು ಘೋಷಿಸಿದರು. ಶಾಂತಿ ಸಮೃದ್ಧಿ ಎಂಬ 180 ಪುಟಗಳ ಡಾಕ್ಯುಮೆಂಟ್ 'ಪ್ಯಾಲೇಸ್ಟಿನಿಯನ್ ಮತ್ತು ಇಸ್ರೇಲಿ ಜನರ ಜೀವನ'ವನ್ನು ಉತ್ತೇಜಿಸಲು ಮತ್ತು ಸುಧಾರಿಸಲು ಪ್ರಯತ್ನಿಸುತ್ತದೆ. ಇಸ್ರೇಲಿ ಅಧಿಕಾರಿಗಳು ಮತ್ತು ಕೆಲವು ಅರಬ್ ನಾಯಕರೊಂದಿಗೆ ಹಲವು ತಿಂಗಳ ಮಾತುಕತೆಗಳ ನಂತರ ಅಧ್ಯಕ್ಷ ಟ್ರಂಪ್ ಅವರ ಮಧ್ಯಪ್ರಾಚ್ಯದ ಪ್ರಮುಖ ವ್ಯಕ್ತಿ, ಜೇರೆಡ್ ಕುಶ್ನರ್ ಅವರು ಯೋಜನೆಯ ಫಲಾನುಭವಿ ಎಂದು ಭಾವಿಸಲಾದ ಪ್ಯಾಲೆಸ್ಟೀನಿಯಾದವರನ್ನು ಕಡೆಗಣಿಸಿದರು. ಅಧ್ಯಕ್ಷ ಟ್ರಂಪ್ ಇದನ್ನು 'ವಾಸ್ತವಿಕ ಶಾಂತಿ ಯೋಜನೆ' ಮತ್ತು ಪ್ಯಾಲೆಸ್ತೀನಿಯರಿಗೆ ಕೊನೆಯ ಅವಕಾಶ ಎಂದು ಕರೆದರು. ನೆತನ್ಯಾಹು ಈ ಯೋಜನೆಯನ್ನು 'ಐತಿಹಾಸಿಕ' ಎಂದು ಬಣ್ಣಿಸಿದರು. ಅದು ‘ಪ್ಯಾಲೆಸ್ಟೀನಿಯಾದ’ ಸ್ವ-ನಿರ್ಣಯದ ನ್ಯಾಯಸಮ್ಮತ ಆಶಯವನ್ನು ಗುರುತಿಸುತ್ತದೆ; ಆದಾಗ್ಯೂ, ಜೆರುಸಲೆಮ್ 'ಇಸ್ರೇಲ್‌ ನ ಅವಿಭಜಿತ ರಾಜಧಾನಿಯಾಗಿ ಉಳಿಯುತ್ತದೆ' ಮತ್ತು ಪ್ಯಾಲೆಸ್ಟೀನಿಯಾದವರು ತಮ್ಮ ರಾಜಧಾನಿಯನ್ನು ಪೂರ್ವ ಜೆರುಸಲೆಮ್ ಅಥವಾ ಇತರ ಯಾವುದೇ ನಗರದ ಅಲ್-ಕುಡ್ಸ್‌ ನಲ್ಲಿ ಸ್ಥಾಪಿಸಲಿದ್ದಾರೆ. ಯೋಜನೆಗೆ ಲಗತ್ತಿಸಲಾದ ‘ಪರಿಕಲ್ಪನಾ ನಕ್...

ಸ್ಟಾಉತ್ತಮವಾಗಿದ ಅಭಿಯಾನದ ಯಶಸ್ಸು

ಸ್ಟಾರ್ಟ್-ಅಪ್ ಇಂಡಿಯಾ ಯೋಜನೆಯು 71 ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿತ್ತು. ಅಲ್ಪಾವಧಿಯಲ್ಲಿಯೇ 300,000 ಉದ್ಯೋಗಗಳನ್ನು ಸೃಷ್ಟಿಸಿದೆ; 26,000 ಕ್ಕೂ ಹೆಚ್ಚು ಸ್ಟಾರ್ಟ್-ಅಪ್‌ಗಳು ಭಾರತದ ಉದ್ದ ಮತ್ತು ಅಗಲವನ್ನು ಗುರುತಿಸುತ್ತಿವೆ. ಸರ್ಕಾರವು ಪೋಷಿಸಿರುವ ಪೂರಕ ಪರಿಸರ ವ್ಯವಸ್ಥೆಯು ಸ್ಟಾರ್ಟ್-ಅಪ್‌ಗಳನ್ನು ಹೆಚ್ಚಿನ ಹೂಡಿಕೆಯ ಹಾದಿಯಲ್ಲಿ ಕಳುಹಿಸಿದೆ. ಒಟ್ಟಾರೆಯಾಗಿ ಭಾರತದಲ್ಲಿ ಸ್ಟಾರ್ಟ್-ಅಪ್‌ಗಳ ಮೌಲ್ಯಮಾಪನವು ಈಗ 35 ಶತಕೋಟಿಯಷ್ಟಿದೆ. ಇಂದು, ಭಾರತದ ಪ್ರಮುಖ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಗಳಿಂದ ಹೊರಹೊಮ್ಮುವ ಪದವೀಧರರು ತಮ್ಮ ವೃತ್ತಿಜೀವನದ ಆಯ್ಕೆಯಾಗಿ ಸ್ಟಾರ್ಟ್-ಅಪ್‌ಗಳನ್ನು ಬಯಸುತ್ತಾರೆ, ಇದು ದೇಶದ ಉದ್ಯಮಶೀಲ ಪ್ರತಿಭೆಗಳ ಯಶಸ್ಸಿನ ಕಥೆಯನ್ನು ನಿರ್ವಿವಾದವಾಗಿ ಹೇಳುತ್ತದೆ. ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸ್ಟಾರ್ಟ್-ಅಪ್ ಕೋಷ್ಟಕವು ನೋಡುಗರಿಗೆ ಅಮೂಲ್ಯವಾದ ಆಕರ್ಷಣೆಯಾಗಿತ್ತು. ಸ್ಟಾರ್ಟ್-ಅಪ್ಸ್ ಪರಿಸರ ವ್ಯವಸ್ಥೆಯನ್ನು ಸೃಜನಾತ್ಮಕವಾಗಿ ಚಿತ್ರಿಸಿರುವ ಕಾರಣ ಸ್ಟಾರ್ಟ್ ಅಪ್ ಸೃಜನಶೀಲತೆಯಲ್ಲೂ ಉತ್ತಮವಾಗಿತ್ತು. ತೆರಿಗೆ ರಿಯಾಯಿತಿಗಳ ಮೂಲಕ ಉತ್ತಮ ಪರಿಸರ ವ್ಯವಸ್ಥೆ ಮತ್ತು ದೊಡ್ಡ ಸಂಸ್ಥೆಗಳಾಗಲು ಸ್ಟಾರ್ಟ್-ಅಪ್‌ಗಳನ್ನು ಪೋಷಿಸುವ ಬಂಡವಾಳದ ಪ್ರವೇಶವನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದೆ. ಸ್ಟಾರ್ಟ್-ಅಪ್ ಇಂಡಿಯಾ ಯೋಜನೆ 2016 ರಲ್ಲಿ ಮಾತ್ರ ಪ್ರಾರಂಭವಾದಂತೆ ಇನ್ನೂ ಹೊಸ ...

ದಾವೋಸ್ ನಲ್ಲಿ ವಿಫಲರಾದ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶ್ವ ಆರ್ಥಿಕ ವೇದಿಕೆ 2020 ರ ಸಭೆಗಾಗಿ ದಾವೋಸ್‌ಗೆ ಭೇಟಿ ನೀಡಿದರು.. ಸ್ವಿಸ್ ಸ್ಕೀ ರೆಸಾರ್ಟ್‌ನಲ್ಲಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಭೇಟಿಯಾದರು. ಈ ಸಂದರ್ಭದಲ್ಲಿ ಖಾನ್ ಮತ್ತೊಮ್ಮೆ ಕಾಶ್ಮೀರ ಮತ್ತು ಭಾರತ ವಿರೋಧಿ ವಿಷಯವನ್ನು ಎತ್ತಿದ್ದಾರೆ. "ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವಾಗ, ನಾವು ಕಾರ್ಯತಂತ್ರವಾಗಿ ಎಷ್ಟು ಪ್ರಬಲರಾಗಿದ್ದೇವೆ ಎಂಬುದನ್ನು ಜಗತ್ತು ನೋಡುತ್ತದೆ" ಎಂದು ಹೇಳಲು ಅವರು ಅದೇ ವೇದಿಕೆಯನ್ನು ಬಳಸಿದರು. "ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದನೆ ಇಲ್ಲ" ಎಂದು ಅವರು ಹೇಳಿದರು. ಯಾವುದೂ ಸತ್ಯದಿಂದ ದೂರವಿರಲು ಸಾಧ್ಯವಿಲ್ಲ. ವಾಸ್ತವದಲ್ಲಿ, ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದ ಅಧಿಕೃತ ಪ್ರೋತ್ಸಾಹವನ್ನು ಅನುಭವಿಸುತ್ತಿವೆ. ಆ ದೇಶದಲ್ಲಿ ಭಯೋತ್ಪಾದಕ ಜಾಲಗಳು ಅಭಿವೃದ್ಧಿ ಹೊಂದುತ್ತಿವೆ. ಪ್ಯಾರಿಸ್ ಮೂಲದ ಜಾಗತಿಕ ಭಯೋತ್ಪಾದನಾ-ವಿರೋಧಿ ಹಣಕಾಸು ವಾಚ್‌ಡಾಗ್ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನ ಮುಂದಿನ ಸಭೆಯಲ್ಲಿ, ಪಾಕಿಸ್ತಾನವನ್ನು “ಪಟ್ಟಿಗೆ” ಸೇರಿಸುವ ಬಗ್ಗೆ ಚರ್ಚಿಸಲಿದೆ. ಪಾಕಿಸ್ತಾನ ಸರ್ಕಾರವು ತನ್ನ ಭೂಪ್ರದೇಶದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಿಗೆ ಈ ಕ್ಷಣ ಚಟುವಟಿಕೆ ಕಡಿಮೆ ಮಾಡಲು ಕೇಳಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದಾವೋಸ್‌ನಲ್ಲಿ ಭಾರತ ಮತ್...

71ನೇ ಗಣರಾಜ್ಯೋತ್ಸವಕ್ಕೆ ಬೊಲ್ಸೊನೋರಾ ಅವರ ಭೇಟಿಯಿಂದ ಬಲಿಷ್ಠಗೊಳ್ಳುವ ಭಾರತ - ಬ್ರಝಿಲ್ ಸಂಬಂಧ

ಭಾರತ ಮತ್ತು ಬ್ರೆಜಿಲ್ ಜಾಗತಿಕ ಸಾಗರದಲ್ಲಿನ ಎರಡು ತಿಮಿಂಗಿಲಗಳು. ಚೀನಾದ ಹೊರತಾಗಿ, ಭಾರತ ಮತ್ತು ಬ್ರೆಜಿಲ್ ಮಾತ್ರ ಮಹಾಶಕ್ತಿಗಳಾಗುವ ಸಾಮರ್ಥ್ಯವನ್ನು ಹೊಂದಿರುವ ಮಹಾನ್ ಶಕ್ತಿಗಳಾಗಿ ಏರಲು ಇಷ್ಟಪಡುವ ದೇಶಗಳು. ಆದರೆ ಬಹಳ ಹಿಂದೆ, ಹಿಂದೂಗಳ ಬೆಳವಣಿಗೆಯ ದರ ಮತ್ತು ಅದರ ದೀರ್ಘಕಾಲದ ಬಡತನಕ್ಕೆ ಭಾರತ ಹೆಸರುವಾಸಿಯಾಗಿದ್ದರೆ, ಬ್ರೆಜಿಲ್ ಅಧಿಕ ಹಣದುಬ್ಬರ ಮತ್ತು ಸಾಲ ಬಾಂಬ್‌ ನ ಸಮಸ್ಯೆಯಿಂದ ತತ್ತರಿಸಿತ್ತು. ಪ್ರಜಾಪ್ರಭುತ್ವದ ಹೊರತಾಗಿಯೂ, ಭಾರತವು ಪಶ್ಚಿಮಕ್ಕೆ ಹಾವು ಆಡಿಸುವವರು ಮತ್ತು ಅತೀಂದ್ರಿಯ ಸಾಧುಗಳ ಭೂಮಿಯಾಗಿ ಉಳಿದಿದ್ದರೆ, ಬ್ರೆಜಿಲ್ ಅನ್ನು ಫ್ರಾನ್ಸ್‌ನ ಚಾರ್ಲ್ಸ್ ಡಿ ಗೌಲ್ ಅವರು "ಗಂಭೀರ ದೇಶವಲ್ಲ" ಎಂದು ತಳ್ಳಿಹಾಕಿದರು. "ಬ್ರೆಜಿಲ್ ಯಾವಗಲೂ ನಾಳಿನ ದೇಶ" ಎಂದು ಅವರು ಹೇಳಿದರು. ಇಂದು, ಭಾರತ ಮತ್ತು ಬ್ರೆಜಿಲ್ ಎರಡೂ ಅಧಿಕಾರಗಳನ್ನು ಸಮತೋಲನಗೊಳಿಸುವುದರಿಂದ ಪ್ರಮುಖ ಜಾಗತಿಕ ಆಟಗಾರರಿಗೆ ಸಾಗಿವೆ. ಕಳೆದ ಒಂದು ದಶಕದಲ್ಲಿ ಉಭಯ ದೇಶಗಳು ತಮ್ಮ ವಿದೇಶಾಂಗ ನೀತಿ ನಿಲುವುಗಳಲ್ಲಿ ವೈವಿಧ್ಯಮಯ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಸಂಬಂಧಗಳ ವಿಭಿನ್ನ ತಂತ್ರಕ್ಕೆ ಹೊಂದಿಕೊಳ್ಳಲಾಗಿದೆ. ಭಾರತದ 71 ನೇ ಗಣರಾಜ್ಯೋತ್ಸವದಂದು ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಅವರ 4 ದಿನಗಳ ಭಾರತ ಪ್ರವಾ...

ಭಾರತದ ಸಂವಿಧಾನ : ದೇಶದ ಅತ್ಯುಚ್ಛ ಕಾನೂನು

ಸಂವಿಧಾನ ಸಭೆಯು ಮೂರು ವರ್ಷಗಳ ಕಠಿಣ ಪರಿಶ್ರಮದ ಮೂಲಕ ಸಂವಿಧಾನದ ಕರಡು ರಚಿಸಿ ಅದನ್ನು ಜಾರಿಗೆ ತಂದಾಗ ಈ ಸಂವಿಧಾನವು ದೀರ್ಘಾಯುಷ್ಯವನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲು ಕೆಲವರಷ್ಟೇ ಸಿದ್ಧರಾಗಿದ್ದರು. ಆದರೆ ಸಂವಿಧಾನ ಕರ್ತೃಗಳ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯ ಕಾರಣದಿಂದ ಅವರು ರಚಿಸಿದ ಭಾರತದ ಸಂಸದೀಯ ಪ್ರಜಾಪ್ರಭುತ್ವವು ಗಟ್ಟಿಯಾಗಿ ಉಳಿದುಕೊಂಡಿದೆ. ಭಾರತೀಯ ಸಂವಿಧಾನವು ಶಾಸಕರು ಮತ್ತು ಸಾಮಾನ್ಯ ನಾಗರಿಕರಿಗೆ ಬೆಳಕಿನ ದಾರಿದೀಪವಾಗಿದೆ. ಏಳು ದಶಕಗಳಲ್ಲಿ, ಅದರ ಮೂಲ ರಚನೆ ಹಾಗೇ ಉಳಿದಿದೆ. ಇದು ಹಲವಾರು ತಿದ್ದುಪಡಿಗಳ ಹೊರತಾಗಿಯೂ, ಮುನ್ನುಡಿಯಲ್ಲಿ ತಿಳಿಸಲಾದ ತತ್ವಗಳು ಅದರ ಮೇಲಿನ ನಂಬಿಕೆಯನ್ನು ಪ್ರೇರೇಪಿಸುತ್ತಲೇ ಇವೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳಿಗೆ ಸಾರ್ವಭೌಮ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವನ್ನು ಜಗತ್ತಿಗೆ ಸಾರುವ ನಮ್ಮ ಸಂವಿಧಾನವು “ನಾವು, ಭಾರತದ ಜನರು” ಎಂಬ ಮುನ್ನುಡಿಯೊಂದಿಗೆ ಪ್ರಾರಂಭವಾಗುತ್ತದೆ. ಇದು ರಾಜ್ಯದ ರಚನೆ ಮತ್ತು ಅಂಗಗಳನ್ನು ವಿವರಿಸುವ ಕಾನೂನು ದಾಖಲೆ ಮಾತ್ರವಲ್ಲ, ಜನರ ನಿಜವಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್ ಆಗಿದೆ. ಗಣರಾಜ್ಯೋತ್ಸವದಂದು ಆಚರಿಸಲಾಗುವ ಸಂವಿಧಾನವು ಹೊಸ ಅರ್ಥದಲ್ಲಿ ಜೀವಂತ ದಾಖಲೆಯಾಗಿದೆ, ಏಕೆಂದರೆ ಅದು ಜನಪ್ರಿಯ ಕಲ್ಪನೆಯಲ್ಲಿ ಬೇರು ಬಿಟ್ಟಿದೆ. 1950 ರ ಜನವರಿ 26 ರಂದು ಭಾರತವು ಗಣರಾಜ್ಯವಾಯಿತು ಮತ್ತ...

ನೈಜರ್ ಮತ್ತು ಟ್ಯು‌ನೀಷಿಯಾದ ಜೊತೆಗೆ ಬಲಿಷ್ಠಗೊಂಡ ಭಾರತದ ಬಾಂಧವ್ಯ

ಆಫ್ರಿಕನ್ ರಾಷ್ಟ್ರಗಳ ಮೇಲೆ ಹೆಚ್ಚು ಗಮನಹರಿಸುವ ಮತ್ತು ಅವರೊಂದಿಗೆ ಹೆಚ್ಚು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧವನ್ನು ಬೆಳೆಸುವ ಪ್ರಯತ್ನದಲ್ಲಿ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಈ ವಾರದ ಆರಂಭದಲ್ಲಿ ನೈಜರ್ ಮತ್ತು ಟುನೀಶಿಯಾಗೆ ಭೇಟಿ ನೀಡಿದರು. ವಿಶ್ವಸಂಸ್ಥೆಯಲ್ಲಿ ಯುಎನ್ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವಕ್ಕಾಗಿನ ಭಾರತದ ಪ್ರಯತ್ನಕ್ಕೆ ಸಹಾಯ ಮಾಡಿದ್ದರಿಂದ ನವದೆಹಲಿ ಈ ಆಫ್ರಿಕನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ವಿದೇಶಾಂಗ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಆಫ್ರಿಕಾವು ವಿದೇಶಾಂಗ ಸಚಿವರ ಮೊದಲ ಆದ್ಯತೆ ಎಂಬುದು ಇದರಿಂದ ಸಾಬೀತಾಗುತ್ತದೆ. ನೈಜರ್‌ನ ನಿಯಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಜೈಶಂಕರ್ ಅವರು ನೈಜರ್ ಅಧ್ಯಕ್ಷ ಮಹಮದೌ ಇಸೌಫೌ ಅವರನ್ನು ಭೇಟಿ ಮಾಡಿದರು. ಎರಡೂ ನಾಯಕರು ಜಂಟಿಯಾಗಿ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದರು. ಪ್ರಸ್ತುತ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಮಹಾತ್ಮ ಗಾಂಧಿಯವರ ಸ್ಮರಣೆಯನ್ನು ಗೌರವಿಸಲು ಭಾರತವು ಆಫ್ರಿಕಾದಲ್ಲಿ ಸ್ಥಾಪಿಸಿದ ಮೊದಲ ಕೇಂದ್ರವಾಗಿದೆ. ಕೇಂದ್ರದ ಸ್ಥಾಪನೆಯು ಭಾರತ-ನೈಜರ್ ಸ್ನೇಹದ ಒಂದು ಹೆಗ್ಗುರುತಾಗಿದೆ. ಇದು ಆಫ್ರಿಕಾದ ಬಗ್ಗೆ ಭಾರತದ ದೃಢವಾದ ಬದ್ಧತೆಯ ಸಂಕೇತವಾಗಿದೆ. ಕೇಂದ್ರವನ್ನು ವಿಶಾಲವಾದ, ಆಧುನಿಕ ಮತ್ತು ಪರಿಸರ ಸ್ನೇಹಿ ಸೌಲಭ್ಯಗಳ...

ಜೆಸಿಪಿಒಎಯಿಂದ ಹಿಂದೆ ಸರಿದ ಇರಾನ್ ಮತ್ತು ಇದರ ಜಾಗತಿಕ ಪರಿಣಾಮ

ಅಮೆರಿಕದಿಂದ ಇರಾನಿನ ಜನರಲ್ ಕಾಸೆಮ್ ಸೊಲೈಮಾನಿ ಕೊಲ್ಲಲ್ಪಟ್ಟ ಬಳಿಕದ ಸರಣಿ ಘಟನೆಗಳ ನಂತರ, ಇತ್ತೀಚಿನ ವಿದ್ಯಮಾನವೊಂದರಲ್ಲಿ ಇರಾನ್ ತಾನು ಪರಮಾಣು ಪ್ರಸರಣ ರಹಿತ ಒಪ್ಪಂದದಿಂದ (ಎನ್‌ಪಿಟಿ) ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದೆ. ಜನರಲ್ ಸೊಲೈಮಾನಿ ಹತ್ಯೆಯ ನಂತರದ ಅತಿ ಮುಖ್ಯ ಘಟನೆ ಇದಾಗಿದ್ದು ಏಕೆಂದರೆ ಇದರ ಪರಿಣಾಮಗಳು ಈ ಪ್ರದೇಶಕ್ಕೆ ಮಾತ್ರವಲ್ಲದೆ ಜಾಗತಿಕವಾಗಿಯೂ ಹಾನಿಕಾರಕವಾಗಬಹುದು. ಇರಾನ್ ಪರಮಾಣು ಒಪ್ಪಂದ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಂಟಿ ಸಮಗ್ರ ಯೋಜನೆ (ಜೆಸಿಪಿಒಎ) ಯ ಷರತ್ತುಗಳನ್ನು ಇನ್ನು ಮುಂದೆ ಪಾಲಿಸುವುದಿಲ್ಲ ಎಂದು ಇರಾನಿನ ಸರ್ಕಾರದ ವರದಿಯ ನಿರ್ಧಾರದಿಂದ ಎನ್‌ಪಿಟಿಯಿಂದ ಹಿಂದೆ ಸರಿಯುವ ಪ್ರಕ್ರಿಯೆ ಪ್ರಾರಂಭವಾಗಿದೆ. ಒಪ್ಪಂದದ ಭಾಗವಾಗಿದ್ದ ಮೂರು ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗಳ ಗುಂಪು ಪರಮಾಣು ಒಪ್ಪಂದದಲ್ಲಿ ಪ್ರತಿಪಾದಿಸಿರುವ ವಿವಾದ ಪರಿಹಾರ ಕಾರ್ಯವಿಧಾನ (ಡಿಆರ್‌ಎಂ) ಅನ್ನು ಪ್ರಚೋದಿಸುವುದಕ್ಕೆ ಪ್ರತಿಕ್ರಿಯೆಯಾಗಿ ಎನ್‌ಪಿಟಿಯಿಂದ ಹಿಂದೆ ಸರಿಯುವ ನಿಲುವನ್ನು ಇರಾನ್‌ನ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಒಪ್ಪಂದದ ಭಾಗವಾಗಿದ್ದ ಮೂರು ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಗಳ ಗುಂಪು ಪರಮಾಣು ಒಪ್ಪಂದದಲ್ಲಿ ಪ್ರತಿಪಾದಿಸಿರುವ ವಿವಾದ ಪರಿಹಾರ ಕಾರ್ಯವಿಧಾನ (ಡಿಆರ್‌ಎಂ) ಅನ್ನು ಪ್ರಚೋದಿಸುವುದಕ್ಕೆ ಪ್ರತಿಕ್ರಿಯೆಯಾಗಿ ಎನ್‌ಪ...

ಭಾರತವು FDI ನಲ್ಲಿ ಅಗ್ರ ಹತ್ತರಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ

ವಿದೇಶಿ ನೇರ ಹೂಡಿಕೆ (FDI) ಒಳಹರಿವು ವಿಷಯದಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಭಾರತವೂ ತನ್ನ ಸ್ಥಾನವನ್ನು ಕಾಪಾಡಿಕೊಂಡು, 2019ರಲ್ಲಿ 42 ಬಿಲಿಯನ್ ಡಾಲರ್‌ನಿಂದ 49 ಬಿಲಿಯನ್ ಡಾಲರ್‌ಗೆ ಅಂದರೆ ಶೇಕಡಾ 16 ರಷ್ಟು ಏರಿಕೆ ಕಂಡಿದೆ. UNCTAD (ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‌ಮೆಂಟ್)ನ "ಇನ್ವೆಸ್ಟ್ಮೆಂಟ್ ಟ್ರೆಂಡ್ ಮಾನಿಟರ್" ಎಂಬ ಇತ್ತೀಚಿನ ವರದಿಯಲ್ಲಿ ಇದನ್ನು ಹೇಳಲಾಗಿದೆ. 2019 ರಲ್ಲಿ ಜಾಗತಿಕ FDI ಸಮತಟ್ಟಾಗಿದ್ದು 1.41 ಟ್ರಿಲಿಯನ್‌ನಿಂದ ಶೇ. 1 ಕುಸಿತವಾಗಿ, 1.39 ಟ್ರಿಲಿಯನ್ ರಷ್ಟು ಆಗಿದೆ. ಈ ಹಿನ್ನೆಲೆಯಲ್ಲೂ ಭಾರತವು FDIನಲ್ಲಿ ಏರಿಕೆ ತೋರಿಸಿದೆ ಎಂದು ವರದಿ ತಿಳಿಸುತ್ತದೆ. US ಮತ್ತು ಚೀನಾ ಎರಡೂ ದೇಶಗಳೂ ಬಂಡವಾಳದ ಹರಿವಿನ ಶೂನ್ಯ-ಬೆಳವಣಿಗೆಯೊಂದಿಗೆ ಸಮತಟ್ಟಾದ FDIಯನ್ನು ಕಂಡಿರುವ ಸಮಯದಲ್ಲಿ, FDIನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ,  ದಕ್ಷಿಣ ಏಷ್ಯಾ ಪ್ರದೇಶದ 60 ಬಿಲಿಯನ್ FDI (ಶೇ. 10 ಹೆಚ್ಚಳ) ದಾಖಲೆಯಲ್ಲಿ, ಭಾರತದ ಪಾಲು ಶೇ. 80 ಕ್ಕಿಂತ ಅಧಿಕವಾಗಿದೆ. ಮಾಹಿತಿ ತಂತ್ರಜ್ಞಾನ ಸೇರಿದಂತೆ ಸೇವಾ ಕೈಗಾರಿಕೆಗಳಿಂದ ಅಗ್ರಪಾಲು ಸಂದಿದೆ. ನಮ್ಮ ನೆರೆಹೊರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ FDI, ಕ್ರಮವಾಗಿ ಶೇ. 6 ಮತ್ತು ಶೇ. 20ರಷ್ಟು ಕುಸಿದಿದ್ದು, 3.4 ಬಿಲಿಯನ್ ಡಾಲರ್ ಮತ್ತು 1.9 ಬಿಲಿಯನ್ ಡಾಲರ್‌ಗಳಷ್ಟಾಗಿದೆ. ಜಗತ್ತಿನಾದ್ಯಂತದ ರಾಜಕೀಯ ವಿಪ...

ಯುರೋಪ್ ಒಕ್ಕೂಟದ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ನೀತಿಯ ಮುಖ್ಯಸ್ಥರಿಂದ ಭಾರತದ ಜೊತೆಗಿನ ಬಲಿಷ್ಠ ಭಾಂದವ್ಯದ ಬಗ್ಗೆ ಪುನರುಚ್ಚರಣೆ

ಯುರೋಪ್ ಒಕ್ಕೂಟದ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ನೀತಿಯ ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ, ಅವರು 2020ರ ರೈಸಿನಾ ಸಂವಾದದಲ್ಲಿ ಭಾಗವಹಿಸಿದ್ದರು. ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಸಮಾನತೆಗಳನ್ನು ಪುನರುಚ್ಚರಿಸುತ್ತಾ, WTOದ ವಿವಾದ ಇತ್ಯರ್ಥ ಕ್ರಮದ ತಡೆಗಟ್ಟುವಿಕೆ ಯುರೋಪ್, ಭಾರತ ಮತ್ತು ಅನೇಕ ಆಗ್ನೇಯ ಏಷ್ಯಾದ ದೇಶಗಳಿಗೆ ಕಳವಳಕ್ಕೆ ಕಾರಣವಾಗಿರುವ ಸಮಯದಲ್ಲಿ, ಎರಡೂ ಪಕ್ಷಗಳು ನಿಯಮ-ಆಧಾರಿತ ಬಹುಪಕ್ಷೀಯ ಆದೇಶವನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿದೆಯೆಂದು ಫಾಂಟೆಲ್ಲೆಸ್ ತಿಳಿಸಿದರು. ಈ ನಿಟ್ಟಿನಲ್ಲಿ, ಈ ಬಿಕ್ಕಟ್ಟನ್ನು ಮುರಿಯಲು EU, ಪ್ರಸ್ತಾಪಗಳನ್ನು ಮಾಡಿದೆ ಎಂದು ಉನ್ನತ ಪ್ರತಿನಿಧಿ ಮಾಹಿತಿ ನೀಡಿದರು. ಎರಡೂ ಪಕ್ಷಗಳ ಬಲವಾದ ಹಿತಾಸಕ್ತಿಗೆ ಈ ಸಮಸ್ಯೆಯನ್ನು ಪರಿಹರಿಸುವುದು ಮತ್ತು ವಾಸ್ತವಿಕ ಪರಿಹಾರಗಳನ್ನು ನೀಡುವುದು ಅವಶ್ಯ. ಕಡಲ್ಗಳ್ಳತನ ಮತ್ತು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆಯಂತಹ ಹಲವಾರು ಸವಾಲುಗಳಿಂದ ಜಾಗತಿಕ ಸಮುದಾಯಕ್ಕೆ ಬೆದರಿಕೆ ಬಂದಾಗ, ಕಡಲ ಸುರಕ್ಷತೆಯನ್ನು ಬಲಪಡಿಸುವುದು ಅತ್ಯಂತ ಕಾಳಜಿಯಾಗಿದೆ. ಆದ್ದರಿಂದ, ಸಮುದ್ರ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ. ಹಾರ್ನ್ ಆಫ್ ಆಫ್ರಿಕಾ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಕಡಲ್ಗ...

ಭಾರತದ GSAT-30 ಉಪಗ್ರಹದ ಯಶಸ್ವಿ ಉಡಾವಣೆ

ಭಾರತದ 41ನೇ ಸಂವಹನ ಉಪಗ್ರಹವಾದ GSAT-30 ಜನವರಿ 17, 2020ರ ಆರಂಭದಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು. 14 ವರ್ಷ ಹಳೆಯ ಇನ್ಸಾಟ್-4A ಉಪಗ್ರಹ ತನ್ನ ಜೀವಿತದ ಕೊನೆಹಂತದಲ್ಲಿರುವ ಕಾರಣ ಅನವರತ ಸಂವಹನದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ತರ ಹೆಜ್ಜೆ ಇಡಲಾಯಿತು. ಭಾರತೀಯ ಕೇಬಲ್ ಆಪರೇಟರ್‌ಗಳು ತಮ್ಮ ಕಾರ್ಯಕ್ರಮಗಳನ್ನು ವಿದೇಶದಲ್ಲಿ ಪ್ರಸಾರ ಮಾಡಲು ಇನ್‌ಸಾಟ್ 4A ಅನ್ನು ಬಳಸುತ್ತಿದ್ದಾರೆ. GSAT-30 ಈ ಸೇವೆಗಳನ್ನು ವಿಸ್ತೃತ ಪ್ರದೇಶದಲ್ಲಿ ಇನ್ನೂ 15 ವರ್ಷಗಳ ಕಾಲ ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಫ್ರೆಂಚ್ ಗಯಾನಾದ ಕೌರೌದಲ್ಲಿರುವ ಯುರೋಪಿನ ಬಾಹ್ಯಾಕಾಶ ನಿಲ್ದಾಣವಾದ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಅರಿಯನ್ ಸ್ಪೇಸ್‌ನ ಅರಿಯೇನ್-5 ರಾಕೆಟ್‌ನಿಂದ GSAT-30ಅನ್ನು ಉಡಾಯಿಸಲಾಯಿತು. ಭಾರತದ ಮೊದಲ ಸಂವಹನ ಉಪಗ್ರಹ 'ಆಪಲ್' ಅನ್ನು 1981ರಲ್ಲಿ ಅರಿಯನ್ ಸ್ಪೇಸ್ನಿಂದ ಉಡಾಯಸಿಸಲಾಗಿತ್ತು. ಈಗ GSAT-30 ಭಾರತೀಯ 24ನೇ ಉಪಗ್ರಹವಾಗಿ ಉಡಾಯಿಸಲ್ಪಟ್ಟಿದೆ. ಇತ್ತೀಚಿನ ಹಾರಾಟದಲ್ಲಿ, ಅರಿಯೇನ್-5 EUTELSAT KONNECTಅನ್ನು ಸಹ ಹೊತ್ತೊಯ್ದಿದೆ, ಇದು ಹೊಸ ಪೀಳಿಗೆಯ ಉಪಗ್ರಹವಾಗಿದ್ದು ಯುರೋಪ್ ಮತ್ತು ಆಫ್ರಿಕಾದಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತದೆ. 15 ವರ್ಷಗಳ ಜೀವಿತಾವಧಿ ಹೊಂದಿರುವ, ಹೊಂದಿಕೊಳ್ಳುವ ಆವರ್ತನ ವಿಭಾಗಗಳು ಮತ್ತು ಹೊಂದಿಕೊಳ್ಳುವ ವ್ಯಾಪ್ತಿಯನ್ನು ಒದಗಿಸುವ ವಿಶಿಷ್ಟ ವಿನ್ಯಾ...

ಮತ್ತೆ ಬಹಿರಂಗವಾದ ಚೀನಾ-ಪಾಕಿಸ್ತಾನದ ಬೆಸುಗೆ

ಕಾಶ್ಮೀರ ವಿಷಯದ ಬಗ್ಗೆ UN ಭದ್ರತಾ ಮಂಡಳಿಯಲ್ಲಿ "ಅನೌಪಚಾರಿಕ ಸಮಾಲೋಚನೆ" ಗೆ ಕರೆ ನೀಡಿದ್ದ ಚೀನಾಗೆ ಮತೊಮ್ಮೆ ಮುಖಭಂಗವಾಗಿದೆ. ಈ ನಡೆಗೆ ಪಾಕಿಸ್ತಾನವೂ ಬೆಂಬಲ ನೀಡಿತ್ತು. ಏನೇ ಆದರೂ, ಭದ್ರತಾ ಮಂಡಳಿಯ ಬಹುಪಾಲು ಸದಸ್ಯರು ಈ ಬೆಂಬಲದ ನಡೆಯನ್ನು ತಳ್ಳಿ ಹಾಕಿದರು. ಭಾರತೀಯ ಸಂವಿಧಾನದ 370ನೇ ಪರಿಚ್ಛೇದವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚೀನಾ ನಡೆಸಿದ ಮೂರನೇ ಪ್ರಯತ್ನವು ಇದಾಗಿದೆ. ಇಂತಹ ಪ್ರಯತ್ನಗಳಿಂದ ಸರಿಯಾದ ಪಾಠಗಳನ್ನು ಬೀಜಿಂಗ್ ಕಲಿಯಬೇಕಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿತು. ಇದು ದ್ವಿಪಕ್ಷೀಯ ಸಮಸ್ಯೆ ಎಂದು UNSCಯ ಹೆಚ್ಚಿನ ಸದಸ್ಯರು ಭಾವಿಸುತ್ತಾರೆ. UNನ ಭಾರತದ ಶಾಶ್ವತ ಪ್ರತಿನಿಧಿಯಾದ ಸೈಯದ್ ಅಕ್ಬರುದ್ದೀನ್ ಅವರು “ದೇಶವನ್ನು ಕಾಡುತ್ತಿರುವ ಅನಾರೋಗ್ಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪಾಕಿಸ್ತಾನದ ಸುಳ್ಳು ಸೋಗಿನ ಅಭ್ಯಾಸವು ಹಾದಿಯ ಕೊನೆ ತಲುಪಿದೆ” ಎಂದು ಹೇಳಿದ್ದಾರೆ. ರಾಜತಾಂತ್ತ್ರಿಕತೆಯು, ಸಣ್ಣದಾದರೂ, ಕ್ಲಿಷ್ಟವಾದ ಹಾಗೂ ನೈಜವಾದ ಹೆಜ್ಜೆಗಳಾಗಿರಬೇಕು. ಇಂತಹ ಸಣ್ಣ ಹೆಜ್ಜೆಯ್ಯನ್ನು ಆಗಸ್ಟ್ 5ರಂದು ಇಟ್ಟಿದ್ದೇವೆ ಎಂದು ಶ್ರೀ ಅಕ್ಬರುದ್ದೀನ್ ಹೇಳಿದ್ದಾರೆ. ವಾಸ್ತವವಾಗಿ, ಭದ್ರತಾ ಮಂಡಳಿಯ ಪ್ರಮುಖ ಶಾಶ್ವತ ಸದಸ್ಯರುಗಳಾದ US , UK, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತದ ಈ ನಡೆಯನ್ನು ಬೆಂಬಲಿಸಿವೆ. ನಾಲ್ಕು ಶಾಶ್ವತ ಸದಸ್ಯರು ಈ ವಿಷಯವನ್ನು ಭಾರತ...

వృద్ధిప‌ధంలో భార‌త్ - అమెరికా సంబంధాలు

అమెరికా ద‌క్షిణ‌, మ‌ధ్య ఆసియాల వ్య‌వ‌హారాల విదేశాంగ స‌హాయ‌మంత్రి ఎలిస్ వెల్స్‌, ఆ దేశ జాతీయ భ‌ద్ర‌తా స‌ల‌హాదారు డిప్యూటీ మాథ్యూ పొటింగ‌ర్ లు భార‌త్ కు వ‌చ్చి ప‌లు ద్వైపాక్షిక స‌మావేశాల్లో పాల్గొన‌డంతో పాటు 5వ రైసినా డైలాగ్ స‌ద‌స్సులో కూడా పాలుపంచుకున్నారు. అలిస్ వెల్స్ త‌న ఉప‌ఖండ ప‌ర్య‌ట‌న‌లో భాగంగా పాకిస్తాన్‌, శ్రీ‌లంక‌ల‌ను కూడా సంద‌ర్శించారు. ఇండో ప‌సిఫిక్ ప్రాంతంపై ఎంతో కీల‌క దృష్టి వుండాల‌ని - మాథ్యూ పొటింగ‌ర్ రైసినా డైలాగ్ లో మాట్లాడుతూ పేర్కొన్నారు. ఇండో ప‌సిఫిక్ ప్రాంతం చ‌ట్టాల‌ను గౌర‌వించే దేశాల‌తో కూడుకున్న‌ద‌ని అన్నారు. స‌ముద్ర జ‌లాల ర‌వాణా స్వేచ్ఛ‌ను, దానిపైనున్న ఆకాశ గ‌మ‌నాన్ని కాపాడుతూ, స్వేచ్ఛా వాణిజ్యానికి తావునిస్తూ, అన్నిటికంటే ముఖ్యంగా - ఆ ప్రాంతంలోని దేశాల సార్వ‌భౌమ‌త్వాన్ని గౌర‌వాన్ని కాపాడే ప్రాంతం ఇండో ప‌సిఫిక్ అని ఆయ‌న అభివ‌ర్ణించారు. ఈ ప్రాంతం స్వేచ్ఛాయుత‌మైన‌ద‌ని ఏ దేశాన్ని త‌ప్పించ‌ద‌ని, అయితే మ‌న దేశాల‌న్నీ ఉమ్మ‌డిగా విశ్వ‌సించే వాటిని ప్ర‌తి దేశం గౌర‌వించాల‌ని కోరుకుంటోంద‌ని పొటింగ‌ర్ అన్నారు. ఇండో ప‌సిఫిక్ ప్రాంత స్వేచ్ఛ‌ను అభిల‌షించేవారు ఆయా దేశ...

ಭಾರತ-ಅಮೆರಿಕ ಒಡಂಬಡಿಕೆ ಬೆಳೆಯುವ ನಿಟ್ಟಿನಲ್ಲಿ

ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೇರಿಕದ ರಾಜ್ಯ ಸಹಾಯಕ ಕಾರ್ಯದರ್ಶಿ Ms. ಆಲಿಸ್ ವೆಲ್ಸ್ ಮತ್ತು ರಾಷ್ಟ್ರೀಯ ಉಪಭದ್ರತಾ ಸಲಹೆಗಾರ ಮ್ಯಾಥ್ಯೂ ಪಾಟಿಂಗರ್ ಅವರು ದ್ವಿಪಕ್ಷೀಯ ಸರಣಿ ಸಭೆಗಳೂ ಮತ್ತು 5ನೇ ರೈಸಿನಾ ಸಂವಾದದಲ್ಲಿ ಭಾಗವಹಿಸಲು ಭಾರತದಲ್ಲಿದ್ದರು. Ms ವೆಲ್ಸ್ ಅವರ ಉಪಖಂಡದ ಭೇಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ನಿಲುಗಡೆಯೂ ಒಳಗೊಂಡಿತ್ತು. ರೈಸಿನಾ ಮಾತುಕತೆಯ ಮಹತ್ತರ ಮಾರುತ್ತರದಲ್ಲಿ, ಮ್ಯಾಥ್ಯೂ ಪಾಟಿಂಗರ್ ಅವರು ಇಂಡೋ-ಪೆಸಿಫಿಕ್ ಒಂದು "ತತ್ವಬದ್ಧ ದೃಷ್ಟಿ" ಎಂದು ಪ್ರಕಟಿಸಿದರು. ಅವರು ಅದನ್ನು ವಿವರಿಸುತ್ತಾ, ಇಂಡೋ-ಪೆಸಿಫಿಕ್ ಅನೇಕ ರಾಷ್ಟ್ರಗಳ ಸಮುದಾಯವಾಗಿದೆ, ಅದು "ಕಾನೂನು ನಿಯಮ’ಗಳನ್ನು ಗೌರವಿಸುತ್ತದೆ, ಸಮುದ್ರ ಮತ್ತು ಆಕಾಶಯಾನದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ, ಮುಕ್ತ ವಾಣಿಜ್ಯವನ್ನು ಉತ್ತೇಜಿಸುತ್ತದೆ, ಮುಕ್ತ ಚಿಂತನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ರಾಷ್ಟ್ರದ ಸಾರ್ವಭೌಮತ್ವದ ಪಾವಿತ್ರ್ಯವನ್ನು ರಕ್ಷಿಸುತ್ತದೆ ಎಂದು ಹೇಳಿದರು. ಆದ್ದರಿಂದ, ಇದು ಮುಕ್ತ ಮತ್ತು ತೆರದ ವಿಚಾರವಾಗಿದೆ ಎಂದು ಹೇಳುತ್ತಾ, ಯಾವುದೇ ರಾಷ್ಟ್ರವನ್ನು ಹೊರತುಪಡಿಸುವುದಿಲ್ಲ, ಆದರೆ ಈ ಸಮಾನ ತತ್ವಗಳನ್ನು ಪ್ರತಿಯೊಂದು ದೇಶವೂ ಗೌರವಿಸಬೇಕು ಹಾಗೂ ಉತ್ತೇಜಿಸಬೇಕು ಎಂದು ಹೇಳಿದರು. ಅಮೆರಿಕದ ರಾಷ್ಟ್ರೀಯ ಉಪಭದ್ರತಾ ಸಲಹೆಗಾರರಾದ ಮ್ಯಾಥ್ಯೂರವರು ಮುಂದುವರಿಸುತ್ತಾ, ಮುಕ್ತ ಹಾಗೂ ತೆರದ...

ರೈಸಿನಾ ಸಂವಾದ 2020

ನಾವು 21ನೇ ಶತಮಾನವು ಮೂರನೇ ದಶಕ ಪ್ರವೇಶಿಸುತ್ತಿದ್ದಂತೆ ಪ್ರಪಂಚ ಅನೇಕ ಜಾಗತಿಕ ಸವಾಲುಗಳಿಗೆ ಹಾಗೂ ಪ್ರಮುಖ ವಿದ್ಯುತ್ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಹೊಸ ಶಕ್ತಿಗಳು ಬೆಳೆಯತೊಡಗುತ್ತಿದ್ದಂತೆ ಹಳೆಯ ಶಕ್ತಿಗಳು ಜಾಗತಿಕ ಸ್ಥಿತಿಯಲ್ಲಿ ಅಪ್ರಸ್ತುತವಾಗತೊಡಗಿವೆ. ಎರಡು ರೀತಿಯ ಐತಿಹಾಸಿಕವಾದ ಅಧಿಕಾರ ಹಸ್ತಾಂತರವಾಗುತ್ತಿವೆ- ಅಧಿಕಾರ ಪರಿವರ್ತನೆ ಹಾಗೂ ಅಧಿಕಾರದ ಪ್ರಸರಣ. ಚೀನಾದ ಅದ್ಭುತ ಬೆಳವಣಿಗೆ ಜಗತ್ತನ್ನು ಅಚ್ಚರಿಗೊಳಿಸಿದೆ. ಆದರೆ ಭಾರತವು ಕೂಡ ಜಾಗತಿಕ ರಾಡಾರ್ ಪರದೆಯಲ್ಲಿ ದೊಡ್ಡದಾಗಿದೆ. ಏಷ್ಯಾ ಖಂಡವು ಆರ್ಥಿಕ ಗುರುತ್ವಾಕರ್ಷಣೆಯ ಜಾಗತಿಕ ಕೇಂದ್ರವಾಗಿ, ಹೆಚ್ಚುತ್ತಿರುವ ಭದ್ರತಾ ಉದ್ವಿಗ್ನತೆಯ ರಂಗಭೂಮಿಯಾಗಿ ಹಾಗೂ ಜಾಗತಿಕ ಪರಿಸರ ಬದಲಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲವಾಗಿ ಹೊರಹೊಮ್ಮಿದೆ. ಅವಿಷ್ಕಾರ ಎನ್ನುವುದು ಭವಿಷ್ಯವನ್ನು ರೂಪಿಸುವಂಥದ್ದು. ಅವಿಷ್ಕಾರದ ಇತಿಹಾಸ‌ ಎಂದರೆ ಹಲವು ವಿಷಯಗಳನ್ನೊಳಗೊಂಡ ಕಥೆ. ನೀವು ಹೊಸತನವನ್ನು ಹೊಂದಿಲ್ಲದಿದ್ದರೆ ಅಪ್ರಸ್ತುತ ಆಗಿಬಿಡುತ್ತೀರಿ. ವಿದೇಶಾಂಗ ನೀತಿ ಹಾಗೂ ಕಾರ್ಯತಂತ್ರದ ಹಿತಾಸಕ್ತಿಗಳ ವಿಷಯದಲ್ಲೂ ಇದು ಸತ್ಯ. ಹೊಸ ಜಗತ್ತು ಸಂಕೀರ್ಣವಾದ ಗಂಭೀರ ಸವಾಲುಗಳನ್ನು ಒಡ್ಡುತ್ತಿದೆ ಆದರೆ ಅವಕಾಶಗಳನ್ನು ಸಹ ನೀಡುತ್ತಿದೆ. ಜಗತ್ತಿನ ದೃಷ್ಟಿ ಪೂರ್ವದ ಕಡೆಯತ್ತ ಸಾಗಿರುವುದರಿಂದ ಪಶ್ಚಿಮದ ದೀರ್ಘಾವಧಿಯು ಅಂತಿಮ ಹಂತಕ್ಕೆ ಬಂದಂತಾಗಿದೆ. ಆದರೆ ಉದಯೋನ್ಮುಖ ಶಕ್ತಿಗಳ...

ಇಂಡೋ-ರಷ್ಯಾ ಸಂಬಂಧ ವೃದ್ಧಿ ನಡುವೆ ಲಾವ್ರೋವ್ ಭಾರತ ಭೇಟಿ

“ರೈಸಿನಾ ಸಂವಾದ” ದಲ್ಲಿ ಭಾಗವಹಿಸಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ನವದೆಹಲಿ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯನ್ನು ಪರಿಶೀಲಿಸಲು ಒಂದು ಅವಕಾಶವನ್ನು ಒದಗಿಸಿತು. ಇರಾನ್, ಲಿಬಿಯಾ ಮತ್ತು ಸಿರಿಯಾವನ್ನು ಒಳಗೊಂಡ ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಲಾವ್ರೊವ್ ಅವರು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರೊಂದಿಗೆ ಆಳವಾದ ಚರ್ಚೆ ನಡೆಸಿದರು. ನಂತರ ರಷ್ಯಾದ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಲಾವ್ರೊವ್ ಅವರೊಂದಿಗಿನ ಸಭೆಯಲ್ಲಿ, ಕಳೆದ ವರ್ಷ ತೆಗೆದುಕೊಂಡ ಹಲವಾರು ಪ್ರಮುಖ ನಿರ್ಧಾರಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಚರ್ಚಿಸಿದರು ಮತ್ತು ನವದೆಹಲಿ ಮತ್ತು ಮಾಸ್ಕೋ ನಡುವೆ ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸಿದ 20 ನೇ ವಾರ್ಷಿಕೋತ್ಸವದ ವರ್ಷವಾದ 2020 ವರ್ಷವನ್ನು ನಿರ್ಧಾರಗಳನ್ನು ಜಾರಿಗೆ ತರುವ ವರ್ಷವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ವಿದೇಶಾಂಗ ಸಚಿವರ ಮಟ್ಟದ ಚರ್ಚೆಯ ಸಮಯದಲ್ಲಿ, ಡಾ. ಜೈಶಂಕರ್ ಮತ್ತು ಲಾವ್ರೊವ್ ಇಬ್ಬರೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಚರ್ಚಿಸಿದರು. ವಿಶ್ವ ಆರ್ಥಿಕತೆ ಮತ್ತು ಪರ್ಷಿಯನ್ ಕೊಲ್ಲಿ ಪ್ರದೇಶದ ಭೌಗೋಳಿಕ ರಾಜಕೀಯದ ಮೇಲೆ ಅದರ ಪ್ರಭಾವದ ಬಗ್ಗೆಯೂ ಮಾತನಾಡಿದರು. ವಿದೇಶಾಂಗ ಮಂತ್ರಿಗಳು 2020ರ ಸಮಗ್ರ ದ್ವಿಪಕ್ಷೀಯ ಕಾರ್ಯಸೂಚ...

ಭಾರತ-ಲಾಟ್ವಿಯಾ ಸಂಬಂಧಕ್ಕೆ ಹೊಸ ಹುರುಪು

ಲಾಟ್ವಿಯಾದ ವಿದೇಶಾಂಗ ಮಂತ್ರಿ ಎಡ್ಗರ್ಸ್ ರಿಂಕೆವಿಕ್ಸ್ ಅವರು ಭಾರತಕ್ಕೆ ನೀಡಿದ ಭೇಟಿ ಲಾಟ್ವಿಯಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಆವೇಗವನ್ನು ಮುಂದಿಡುತ್ತದೆ. ಸೆಪ್ಟೆಂಬರ್ 2016 ರಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಲಾಟ್ವಿಯಾಕ್ಕೆ ಭೇಟಿ ನೀಡಿದ್ದರು. ಲಾಟ್ವಿಯಾದ ಪ್ರಧಾನಿ 2017 ರ ನವೆಂಬರ್‌ನಲ್ಲಿ ಭಾರತಕ್ಕೆ ಮೊದಲ ಭೇಟಿ ನೀಡಿದರು. ಭಾರತದ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಆಗಸ್ಟ್ 2019 ರಲ್ಲಿ ಲಾಟ್ವಿಯಾಕ್ಕೆ ಭೇಟಿ ಕೊಟ್ಟಿದ್ದರು. ಲಾಟ್ವಿಯಾದೊಂದಿಗೆ ಭಾರತದ ಸಂಬಂಧವು ನೂರು ವರ್ಷಗಳ ಹಿಂದಕ್ಕೆ ಹೋಗುತ್ತದೆ. 22 ಸೆಪ್ಟೆಂಬರ್ 1921 ರಂದು, ಲಾಟ್ವಿಯಾ ಲೀಗ್ ಆಫ್ ನೇಷನ್ಸ್‌ನ ಸ್ವತಂತ್ರ ಸದಸ್ಯತ್ವ ಪಡೆಯಿತು. 1920ರ ಜನವರಿ 10 ರಿಂದ ಲೀಗ್‌ನ ಮೂಲ ಸಂಸ್ಥಾಪಕ-ಸದಸ್ಯರಾಗಿ, ಭಾರತವು ವಿಶ್ವದ ಈ ಬಹುಪಕ್ಷೀಯ ಸಂಘಟನೆಗೆ ಲಾಟ್ವಿಯಾದ ಸದಸ್ಯತ್ವವನ್ನು ಬೆಂಬಲಿಸಿತು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಹಕಾರವು ಭಾರತ ಮತ್ತು ಲಾಟ್ವಿಯಾ ನಡುವೆ ಸಂಪರ್ಕಗಳನ್ನು ಅಭಿವೃದ್ಧಿಪಡಿಸಿದ ಕ್ಷೇತ್ರವಾಗಿತ್ತು. ಲಾಟ್ವಿಯಾದ ಬೌದ್ಧಿಕ ಸಹಕಾರಕ್ಕಾಗಿ ರಾಷ್ಟ್ರೀಯ ಸಮಿತಿಯನ್ನು 1923 ರಲ್ಲಿ ರಿಗಾ ವಿಶ್ವವಿದ್ಯಾಲಯದಲ್ಲಿ ಲಾಟ್ವಿಯನ್ ವಿದೇಶಾಂಗ ಸಚಿವಾಲಯದ ಸಹಾಯದಿಂದ ಸ್ಥಾಪಿಸಲಾಯಿತು. ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಲೀಗ್‌ನ ಅಂತರರಾಷ್ಟ್ರೀಯ ಸಮಿತಿಯ ಸ...

ಓಮನ್: ಯುಗದ ಅಂತ್ಯ

ಐದು ದಶಕಗಳ ಕಾಲ ಆಳಿದ, ಪ್ರಮುಖ ಕೊಲ್ಲಿ ದೇಶಗಳಲ್ಲಿ ಕಾವಲುಗಾರರ ಬದಲಾವಣೆಗೆ ದಾರಿ ಮಾಡಿಕೊಟ್ಟ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರು ದೀರ್ಘಾವಧಿ ಕಾಯಿಲೆಯ ಬಳಲಿಕೆ ಬಳಿಕ ಜನವರಿ 10ರಂದು ನಿಧನರಾಗುವ ಮೂಲಕ ಒಮನ್ ದೇಶದ ಒಂದು ಯುಗ ಅಂತ್ಯಗೊಂಡಂತಾಗಿದೆ. ಸುಲ್ತಾನ್ ಕಬೂಸ್ ಮೇರು ವ್ಯಕ್ತಿತ್ವದ ಆಡಳಿತಗಾರರಾಗಿದ್ದರು ಹಾಗೂ ಜಾಗತಿಕವಾಗಿ ಗೌರವಿಸಲ್ಪಟ್ಟವರಾಗಿದ್ದರು. 79 ವರ್ಷದ ಸುಲ್ತಾನ್ ಪ್ರಾದೇಶಿಕವಾಗಿ ಭಾರೀ ಪ್ರಭಾವಿಗಳಾಗಿದ್ದ ಸೌದಿ ಅರೇಬಿಯಾ ಮತ್ತು ಇರಾನ್‌ಗಳ ಜೊತೆ ಒಮನ್ ಸಮತೋಲನ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಒಮಾನ್‌ ದೇಶಕ್ಕೆ ಸ್ಥಿರತೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ತಂದುಕೊಟ್ಟರು. 1970ರಲ್ಲಿ ರಕ್ತರಹಿತ ದಂಗೆಯಲ್ಲಿ ತನ್ನ ಸಂಪ್ರದಾಯವಾದಿ ತಂದೆ ಸೈದ್ ಬಿನ್ ತೈಮೂರ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಸುಲ್ತಾನ್ ಕಬೂಸ್ ಅವರು ಧೋಫರ್ ದಂಗೆಯನ್ನು ದಮನ ಮಾಡಿದರು. ಗುಲಾಮಗಿರಿಯನ್ನು ರದ್ದುಪಡಿಸಿದರು‌. ಒಮಾನ್ ದೇಶವನ್ನು ಆಧುನೀಕರಣದ ಹಾದಿಗೆ ಕೊಂಡೊಯ್ದರು. 1996ರಲ್ಲಿ ಮೊದಲ ಲಿಖಿತ ಸಂವಿಧಾನವನ್ನು ಮಂಡಿಸಿದರು. ರಾಜಕೀಯ, ವ್ಯಾಪಾರ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಿದರು. ಆಧುನಿಕ ಒಮಾನ್‌ ಪಿತಾಮಹ ಎಂದು ಕರೆಯಲ್ಪಡುವ ಇವರು 2015ರ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು....

ಭಾರತಕ್ಕೆ ಶ್ರೀಲಂಕಾ ವಿದೇಶಾಂಗ ಸಚಿವರ ಚೊಚ್ಚಲ ವಿದೇಶ ಪ್ರವಾಸ

ಶ್ರೀಲಂಕಾದ ವಿದೇಶಾಂಗ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಹಾಗೂ ಕಾರ್ಮಿಕ ಸಚಿವ ದಿನೇಶ್ ಗುಣವರ್ಧನ ಭಾರತಕ್ಕೆ ಮೊದಲ ಅಧಿಕೃತ ವಿದೇಶ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ನಾಲ್ಕು ಸದಸ್ಯರ ಉನ್ನತ ಮಟ್ಟದ ನಿಯೋಗ ಕೂಡ ಇತ್ತು. ಇದು 2019ರ ನವೆಂಬರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಭಾರತ ಭೇಟಿಯ ಮುಂದುವರಿದ ಭಾಗವಾಗಿದೆ. ಭೇಟಿ ಸಂದರ್ಭದಲ್ಲಿ ಗುಣವರ್ಧನ ಅವರು ಭಾರತೀಯ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಸೇರಿದಂತೆ ವಿದೇಶಾಂಗ ಸಚಿವಾಲಯಗಳ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್ಐಸಿಸಿಐ) ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ನವದೆಹಲಿ ಮೂಲದ ಸಾರ್ವಜನಿಕ ಹಿತಾಸಕ್ತಿ ಸಂಶೋಧನೆ ಮತ್ತು ವಕಾಲತ್ತು ಸಂಸ್ಥೆಯಾದ ವಿಜ್ಞಾನ ಮತ್ತು ಪರಿಸರ ಕೇಂದ್ರ ಮತ್ತು ಮಹಾಬೋಧಿ ಸೊಸೈಟಿ ಆಫ್ ಇಂಡಿಯಾದ ನವದೆಹಲಿ ಕೇಂದ್ರಕ್ಕೆ ಭೇಟಿ ನೀಡಿದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ನಡೆಸಿದ ನಿಯೋಗ ಮಟ್ಟದ ಮಾತುಕತೆ ಸಂದರ್ಭದಲ್ಲಿ ಎರಡೂ ದೇಶಗಳ ಸಚಿವರು ಹೂಡಿಕೆ, ಭದ್ರತೆ, ಮೀನುಗಾರಿಕೆ, ಅಭಿವೃದ್ಧಿ ನೆರವು, ಚಾಲ್ತಿಯಲ್ಲಿರುವ ಯೋಜನೆಗಳು, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಸಾಂಸ್ಕೃತಿಕ ಸಹಕ...

ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೈಜ್ಞಾನಿಕ ಸಾಮರ್ಥ್ಯ

ವಿಜ್ಞಾನವು ಸಾಂಪ್ರದಾಯಿಕವಾಗಿ ಪ್ರಯೋಗಾಲಯಗಳ ನಾಲ್ಕು ಗೋಡೆಗಳ ಮಧ್ಯಲ್ಲಿಯೇ ಉಳಿದಿದೆ, ಆದರೆ ಭಾರತದ ಗಮನವು ಈಗ ಸಾಮಾಜಿಕವಾಗಿ ಪ್ರಸ್ತುತವಾಗುವತ್ತ ಹರಿದಿದ್ದು ಇದು ರಾಷ್ಟ್ರವು ಪ್ರಗತಿಯ ಪಥದತ್ತ ಸಾಗಲು ಸಹಾಯ ಮಾಡುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ವೈಜ್ಞಾನಿಕ ಸಭೆಯ “ಮಹಾಕುಂಭ” ಎಂದೇ ವರ್ಣಿಸಲಾಗುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಆವೃತ್ತಿಯಲ್ಲಿ ವಿಜ್ಞಾನವು ಹೆಚ್ಚು ಜನರಿಗೆ ತಲುಪುವ ಉದ್ದೇಶದಿಂದ ಭಾರತದ ರಾಷ್ಟ್ರೀಯ ನಾಯಕರು ಲ್ಯಾಬ್ ಮತ್ತು ಭೂಮಿ, ಲ್ಯಾಬ್ ಮತ್ತು ಕೆಲಸದ ಮಹಡಿ ಅಥವಾ ಲ್ಯಾಬ್ ಮತ್ತು ಆರೋಗ್ಯ ಸೌಲಭ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕೆಂದು ಕರೆ ಕೊಟ್ಟರು. ಈ ವರ್ಷದ ಭಾರತೀಯ ವಿಜ್ಞಾನ ಕಾಂಗ್ರೆಸ್ ಆವೃತ್ತಿಯ ವಿಷಯವೆಂದರೆ, ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’. “ತಂತ್ರಜ್ಞಾನವು ಸರ್ಕಾರ ಮತ್ತು ಸಾಮಾನ್ಯ ಜನರ ನಡುವಿನ ಸೇತುವೆಯಾಗಿದೆ. ತಂತ್ರಜ್ಞಾನವು ತ್ವರಿತ ಅಭಿವೃದ್ಧಿ ಮತ್ತು ಸರಿಯಾದ ಅಭಿವೃದ್ಧಿಗೆ ಸಮತೋಲನ ಅಂಶವಾಗಿದೆ. ತಂತ್ರಜ್ಞಾನವು ಯಾವುದೇ ಪಕ್ಷಪಾತ ಹೊಂದಿರುವುದಿಲ್ಲ ಅಥವಾ ಅದು ಯಾವುದೇ ಬಣವಾಗಿರುವುದಿಲ್ಲ, ತಟಸ್ಥ ನಿಲುವು ಹೊಂದಿರುತ್ತದೆ. ಮಾನವ ಸಂವೇದನೆ ಹಾಗೂ ಆಧುನಿಕ ತಂತ್ರಜ್ಞಾನದ ನಡುವೆ ಸಮನ್ವಯ ಉಂಟಾದರೆ ಅಭೂತಪೂರ್ವ ಫಲಿತಾಂಶ ಪ್ರತಿಫಲಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಉದ್ದೇಶಿ...

ಸ್ಕ್ರಿಪ್ಟ್: ಡಾ. ಜೈನಾಬ್ ಅಖ್ತರ್, ಪಾಕಿಸ್ತಾನದ ಕಾರ್ಯತಂತ್ರದ ವಿಶ್ಲೇಷಕ

2019ರ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಬೇಕಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಬಜ್ವಾ ಅವರ ಅಧಿಕಾರಾವಧಿಯನ್ನು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಆಗಸ್ಟ್ 2019ರಲ್ಲಿ ಅಧಿಸೂಚನೆ ಹೊರಡಿಸಿ ಮೂರು ವರ್ಷಗಳವರೆಗೆ ವಿಸ್ತರಿಸಿದ್ದಾರೆ. ಅಲ್ಲದೆ ಇಮ್ರಾನ್ ಖಾನ್ ಸರ್ಕಾರ ಈ ವಿಸ್ತರಣೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದೆ. ಬಾಲಕೋಟ್ ವೈಮಾನಿಕ ದಾಳಿ, ಪುಲ್ವಾಮಾ ಸ್ಫೋಟದ ನಂತರ ಜಮ್ಮು ಕಾಶ್ಮೀರದಲ್ಲಿ ಆದ ಭಾರತದ ಸಾಂವಿಧಾನಿಕ ಬದಲಾವಣೆಗಳು ಹಾಗೂ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಹೆಚ್ಚುತ್ತಿರುವ ಉದ್ವಿಗ್ನತೆಯ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಭದ್ರತಾ ವಾತಾವರಣದಲ್ಲಿ “ಅಸಾಧಾರಣ ಪರಿಸ್ಥಿತಿ” ನಿರ್ಮಾಣವಾಗಿದೆ. ಆದರೆ ಅಚ್ಚರಿಯ ಬೆಳವಣಿಗೆವೊಂದರಲ್ಲಿ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಕಳೆದ ನವೆಂಬರ್ 26ರಂದು ವಿಸ್ತರಣಾ ನೋಟಿಸ್ ಅನ್ನು ಅಮಾನತುಗೊಳಿಸಿದೆ. ಮುಖ್ಯವಾಗಿ ಸಂಬಂಧಿತ ಕಾನೂನುಗಳ ಅನುಷ್ಠಾನದಲ್ಲಿ ಆಗುತ್ತಿರುವ ಅಕ್ರಮಗಳು ಮತ್ತು ಲೋಪದೋಷಗಳನ್ನು ಉಲ್ಲೇಖಿಸಿ ವೈಜ್ಞಾನಿಕ ಕಾರಣಗಳ ಬಗ್ಗೆ ಪ್ರಶ್ನಿಸಿದೆ. ಸಂವಿಧಾನ 243ನೇ ವಿಧಿ 3ನೇ ನಿಯಮದ ಪ್ರಕಾರ ಸೇನಾ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಬಗ್ಗೆ ಯಾವುದೇ ಉಲ್ಲೇಖ‌ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಒತ್ತಿ ಹೇಳಿದೆ. ಹಿರಿಯ ಸಿಬ್ಬಂದಿಗಳ ಅಧಿಕಾರಾವಧಿ ವಿಸ್ತರಣೆ/ಮರು ನೇಮಕದ ಕಾನೂನು/ಶಾಸನಗಳನ್ನು ರೂಪಿಸುವಂತೆ ಪಿಟಿಐ ಸರ್ಕಾರಕ್ಕೆ ಅದು ಆ...

ಉದ್ವಿಗ್ನತೆ ತಗ್ಗಿಸಲು ಯುಎಸ್-ಇರಾನ್ ಗೆ ಭಾರತ ಕರೆ

ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಇರಾನ್ ಸೇನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಖಾಸಿಂ ಸೊಲೈಮಾನಿಯನ್ನು‌ ಹತ್ಯೆ ಮಾಡಿದ ಅಮೆರಿಕದ ಏಕಪಕ್ಷೀಯ ನಿರ್ಧಾರವು ಆ ಪ್ರದೇಶದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ದಾಳಿಯಿಂದಾಗಿ ಅಮೆರಿಕದ ವಿರುದ್ಧ ಇರಾನಿನಲ್ಲಿ ಸಾರ್ವಜನಿಕ ಅಭಿಪ್ರಾಯ ತೀವ್ರವಾಗಿ ರೂಪುಗೊಳ್ಳುತ್ತಿದೆ‌. ಇರಾನ್ ಮತ್ತು ಅಮೆರಿಕ ನಡುವಿನ ಮಾತುಕತೆಗೆ ಇದ್ದ ಅವಕಾಶಗಳು ಕ್ಷೀಣಿಸುತ್ತಿವೆ. ಇದರಿಂದಾಗಿ ಟ್ರಂಪ್ ಆಡಳಿತ ಘೋಷಿರುವ ಮಧ್ಯಪ್ರಾಚ್ಯದಿಂದ ಅಮೆರಿಕದ ಸೈನಿಕರನ್ನು ಮರಳಿ ಕರೆತರುವ ಹಾಗೂ ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ರಾಜ್ಯವಾಗುವುದನ್ನು ತಡೆಯುವ ಎರಡೂ ಗುರಿಗಳು ಈಡೇರದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಅಮೆರಿಕ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರದಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಹಡಗು ಮಾರ್ಗಗಳು ಹಾಗೂ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಇರಾನ್‌ ಜೊತೆ ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಗಲ್ಫ್‌ ಪ್ರದೇಶದ ಅದರ ಇತರೆ ಮಿತ್ರರಾಷ್ಟ್ರಗಳಲ್ಲೂ ಆತಂಕ ಉಂಟಾಗಿದೆ. ಇರಾಕಿನಲ್ಲಿರುವ ಅಮೆರಿಕದ ಎರಡು ವಾಯುಪಡೆ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ. ಹತ್ಯೆಯಾಗಿದ್ದ ಜನರಲ್ ಸೊಲೈಮಾನಿ ಸೇನೆಯ ಅಧಿಕಾರಿಯಾಗಿದ್ದರಿಂದ ಈಗ ಸೇನಾ ನೆಲೆಗಳ ಮೇಲೆಯೇ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ತೆಹ್ರಾನ್ ಹೇಳಿ...