ಭಾರತ ‑ಪಾಕ್ ನಡುವೆ ಕರ್ತಾರ್ ಪುರ ಒಪ್ಪಂದ

ಕರ್ತಾರ್ ಪುರ ಒಪ್ಪಂದ ವಾಘಾ-ಅಟ್ಟಾರಿ ಗಡಿಯಲ್ಲಿ ಭಾರತೀಯ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ಭಾರತದ ಯಾತ್ರಿಕರಿಗೆ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ಐತಿಹಾಸಿಕ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್‌ನ ಪ್ರಕ್ರಿಯೆಗಳನ್ನು ಅಂತಿಮಗೊಳಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

16 ನೇ ಶತಮಾನದ ಗುರುದ್ವಾರವು ಸಿಖ್ ನಂಬಿಕೆಯ ಪ್ರತೀಕವಾಗಿದೆ. ಇದು ಅಪಾರ ಐತಿಹಾಸಿಕ ಮತ್ತು ಧಾರ್ಮಿಕ ಮೌಲ್ಯವನ್ನು ಹೊಂದಿದೆ. ಸಿಖ್ ಗುರು ಗುರುನಾನಕ್ ದೇವ್ ಜಿ ಅವರ ಕೊನೆಯ ವರ್ಷಗಳಲ್ಲಿ ಇಲ್ಲಿ ನೆಲೆಸಿದರು ಮತ್ತು 1539ರಲ್ಲಿ ಈ ಸ್ಥಳದಲ್ಲಿ ಕೊನೆಯುಸಿರೆಳೆದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆಯೂ ಅಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಕರ್ತಾರ್‌ಪುರ ಕಾರಿಡಾರ್‌ಗೆ 26ನೇ ನವೆಂಬರ್ 2018 ರಂದು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಬಳಿ ಮತ್ತು 2018 ರ ನವೆಂಬರ್ 28 ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾರ್ತಾರ್ಪುರ್ ಸಾಹಿಬ್ ಗುರುದ್ವಾರ ಬಳಿ ಶಂಕು ಸ್ಥಾಪನೆ ಸಮಾರಂಭವನ್ನು ನೆರವೇರಿಸಿದರು.

ಕಾರಿಡಾರ್‌ ಬಗ್ಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಸುತ್ತಿನ ಮಾತುಕತೆ ಈ ವರ್ಷದ ಮಾರ್ಚ್‌ನಲ್ಲಿ ನಡೆಯಿತು. ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ತಾಂತ್ರಿಕ ಸಮಿತಿಗಳ ನಡುವೆ ಮೂರು ಸುತ್ತಿನ ಚರ್ಚೆಗಳು ನಡೆದಿವೆ. ಮಾತುಕತೆಗಾಗಿ ಪಾಕಿಸ್ತಾನ ರಚಿಸಿದ ತಂಡದಲ್ಲಿ ಖಲಿಸ್ತಾನಿ ಪರ ವ್ಯಕ್ತಿಗಳು ಇರುವುದನ್ನು ಭಾರತ ಆಕ್ಷೇಪಿಸಿತು. ಹೀಗಾಗಿ ಎರಡನೇ ಸುತ್ತಿನ ಮಾತುಕತೆಗೆ ಮುಂಚಿತವಾಗಿ ಅವರನ್ನು ಸಮಿತಿಯಿಂದ ಇಸ್ಲಾಮಾಬಾದ್ ತೆಗೆದುಹಾಕಿತು. ಅಂದರೆ ನವದೆಹಲಿಯ ಬೇಡಿಕೆಯನ್ನು ಒಪ್ಪಿಕೊಂಡಿತು. ಎರಡನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ, ಯಾತ್ರಿಕರಿಗೆ ಸುರಕ್ಷಿತ  ವಾತಾವರಣವನ್ನು ಖಾತರಿಪಡಿಸುವ ಅಗತ್ಯವನ್ನು ಭಾರತ ಒತ್ತಿಹೇಳಿತು. ದುಷ್ಕರ್ಮಿಗಳು ತೀರ್ಥಯಾತ್ರೆಯನ್ನು ಅಡ್ಡಿಪಡಿಸಲು ಪ್ರಯತ್ನಿಸಬಹುದು ಮತ್ತು ಯಾತ್ರಿಕರ ಭಾವನೆಗಳಿಗೆ ಹಾನಿ ಮಾಡುವ ಪ್ರಯತ್ನಿಸಬಹುದಾದ ಬಗ್ಗೆ ಭಾರತೀಯ ನಿಯೋಗ ಪಾಕಿಸ್ತಾನಕ್ಕೆ ಒಂದು ಪತ್ರವನ್ನು ಹಸ್ತಾಂತರಿಸಿತು. ಭಾರತ ವಿರೋಧಿ ಚಟುವಟಿಕೆಗಳಿಗೆ ಕಾರಿಡಾರ್ ಅನ್ನು ಬಳಸಲು ಅಂತಹ ಯಾವುದೇ ಅಂಶಗಳನ್ನು ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ಭಾರತಕ್ಕೆ ಭರವಸೆ ನೀಡಿತು.

ದಿನಕ್ಕೆ 500 ರಿಂದ 700 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕೆಂಬ ಹಿಂದಿನ ನಿಲುವಿಗೆ ವಿರುದ್ಧವಾಗಿ, ಪಾಕಿಸ್ತಾನವು ಪ್ರತಿದಿನ 5,000 ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸಲು ಒಪ್ಪಿಕೊಂಡಿದೆ, ಇದು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಸಾಗರೋತ್ತರ ನಾಗರಿಕರ (ಒಸಿಐ) ಕಾರ್ಡ್ ಹೊಂದಿರುವವರಿಗೆ ವರ್ಷಪೂರ್ತಿ ಕರ್ತಾರ್‌ಪುರ್‌ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಒದಗಿಸಲಾಗಿದೆ. ವ್ಯಕ್ತಿಗಳಾಗಿ ಅಥವಾ ಗುಂಪುಗಳಾಗಿ ಹೋಗಲು ಅಥವಾ ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ಅವರಿಗೆ ಅವಕಾಶವಿರುತ್ತದೆ. ವಿಶೇಷ ಸಂದರ್ಭಗಳಲ್ಲಿ 10,000 ಹೆಚ್ಚುವರಿ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಬೇಡಿಕೆಯನ್ನು ಭಾರತ ಪುನರುಚ್ಚರಿಸಿತು. ಯಾತ್ರಿಕರಿಗೆ ಅವರ ನಂಬಿಕೆಯ ದೃಷ್ಟಿಯಿಂದ ಯಾವುದೇ ನಿರ್ಬಂಧವಿರಬಾರದು ಎಂಬ ಗುರುನಾನಕ್ ದೇವ್ ಜಿ ಅವರ ಬೋಧನೆಗಳು ಸಾರ್ವತ್ರಿಕ ಮನವಿಯನ್ನು ಹೊಂದಿದ್ದು, ಸಿಖ್ಖರು ಮತ್ತು ಹಿಂದೂಗಳು ಪಂಜಾಬ್ ಮತ್ತು ಇತರ ಕಡೆಗಳಲ್ಲಿರುವ ಪವಿತ್ರ ಗುರುದ್ವಾರಗಳಲ್ಲಿ ನಮಸ್ಕರಿಸುತ್ತಾರೆ. ಇದು ಇಸ್ಲಾಮಾಬಾದ್‌ಗೆ ಈ ಸಂಗತಿ ಚೆನ್ನಾಗಿ ತಿಳಿದಿದೆ ಮತ್ತು ಆದ್ದರಿಂದ ಯಾತ್ರಾರ್ಥಿಗಳಿಗೆ ಅವರ ನಂಬಿಕೆಯ ದೃಷ್ಟಿಯಿಂದ ಯಾವುದೇ ನಿರ್ಬಂಧವಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.

ಪಾಕಿಸ್ತಾನವು ಈ ಹಿಂದೆ ಯಾತ್ರಿಕರಿಗೆ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಶುಲ್ಕ ವಿಧಿಸುವ ವಿಷಯವನ್ನು ಎತ್ತಿತ್ತು ಮತ್ತು ಯಾತ್ರಾರ್ಥಿಗಳಿಗೆ ಪರವಾನಗಿ ನೀಡುವ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶವನ್ನೂ ತೋರಿಸಿತು. ಈ ಎರಡು ಅಂಶಗಳ ಬಗ್ಗೆ ಮರುಪರಿಶೀಲಿಸುವಂತೆ ಭಾರತ ಮತ್ತೆ ಪಾಕಿಸ್ತಾನವನ್ನು ಕೇಳಿದೆ.

ಪಾಕಿಸ್ತಾನವು ತನ್ನ ಬದಿಯಲ್ಲಿರುವ ಮೂಲಸೌಕರ್ಯ ಅಡಚಣೆಗಳನ್ನು ತಿಳಿಸಿತು ಮತ್ತು ಭಾರತದ ಅನೇಕ ಪ್ರಸ್ತಾಪಗಳನ್ನು ಹಂತಹಂತವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಆದರೆ ಇದು ಮೊದಲೇ ಪ್ರಸ್ತಾಪಿಸಿದಂತೆ ಕಾಸ್‌ವೇಗೆ ಬದಲಾಗಿ ಹಳೆಯ ರಾವಿ ನದಿ ಮೇಲೆ ಸೇತುವೆಯನ್ನು ನಿರ್ಮಿಸಲು ತಾತ್ವಿಕವಾಗಿ ಒಪ್ಪಿಕೊಂಡಿತು. ಭಾರತವು ತನ್ನ ಭೂಪ್ರದೇಶದಲ್ಲೂ ಸೇತುವೆ ನಿರ್ಮಿಸುತ್ತಿದೆ. ಭಾರತೀಯ ತಂಡವು ವಿವರವಾದ ಪ್ರವಾಹ ವಿಶ್ಲೇಷಣೆಯನ್ನು ಪಾಕಿಸ್ತಾನದ ನಿಯೋಗದೊಂದಿಗೆ ಹಂಚಿಕೊಂಡ ನಂತರ, ಈ ಪ್ರದೇಶದಲ್ಲಿ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿ ಯಾತ್ರಾರ್ಥಿಗಳಿಗೆ ಅದು ತೊಂದರೆ ಉಂಟು ಮಾಡಲಿದೆ ಎಂದು ಚರ್ಚಿಸಲಾಯಿತು.

ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ಗೆ ಸಂಬಂಧಿಸಿದಂತೆ ಒಪ್ಪಂದ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಂವಹನ ಮಾರ್ಗವನ್ನು ನಿರ್ವಹಿಸಲು ಮತ್ತು ಕೆಲಸ ಮಾಡಲು ಎರಡೂ ದೇಶದವರು ಒಪ್ಪಿದ್ದಾರೆ. ಪವಿತ್ರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ತಂಡಗಳು ಮತ್ತೆ ಸಭೆ ಸೇರುತ್ತವೆ. 2019 ರ ನವೆಂಬರ್ ವೇಳೆಗೆ ಕರ್ತಾರ್‌ಪುರ ಕಾರಿಡಾರ್ ಕಾರ್ಯರೂಪಕ್ಕೆ ಬರಲಿದೆ ಎಂದು ಆಶಿಸಲಾಗಿದೆ; ಆದ್ದರಿಂದ ಈ ವರ್ಷದ ನವೆಂಬರ್ 12 ರಂದು ಗುರುನಾನಕ್ ದೇವ್ ಜಿ ಅವರ 550 ನೇ ಜನ್ಮದಿನಾಚರಣೆಯ ಮೊದಲು ತೀರ್ಥಯಾತ್ರೆ ಪ್ರಾರಂಭವಾಗಬಹುದು.

 



Comments