ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ: ಶಾಂತಿಗೆ ಅವಕಾಶ ಸಿಗಬಹುದೇ?

ತಾಲಿಬಾನ್ ಪತನದ ನಂತರ ಎರಡು ಬಾರಿ ಮುಂದೂಡಲ್ಪಟ್ಟ, ನಾಲ್ಕನೇ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್ 28 ರಂದು ಭಾರಿ ಭದ್ರತೆಯ ಮಧ್ಯೆ ಹಿಂಸಾಚಾರದ ನೆರಳಿನಲ್ಲಿ ನಡೆದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 9.6 ಮಿಲಿಯನ್ ನೋಂದಾಯಿತ ಅರ್ಹ ಮತದಾರರಿಗಾಗಿ ದೇಶಾದ್ಯಂತ 4,900 ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಆದರೆ, ಕಳೆದ ಚುನಾವಣೆಯಲ್ಲಿ ಶೇ .60 ಕ್ಕೆ ಹೋಲಿಸಿದರೆ ಮತದಾನ ಪ್ರಮಾಣ ಶೇಕಡಾ 20 ರಷ್ಟಿತ್ತು. ಶಾಂತಿಯುತವಾಗಿ, ಚುನಾಯಿತ ಆಡಳಿತವು ಮುಖ್ಯವಾಗಿ ತಾಲಿಬಾನ್ ಜೊತೆ ಮಾತುಕತೆ ನಡೆಸುವ ನ್ಯಾಯಸಮ್ಮತತೆಯನ್ನು ಹೊಂದಿರುತ್ತದೆ.

ಚುನಾವಣಾ ದಿನದಂದು ದೇಶಾದ್ಯಂತ ರಾಕೆಟ್ ದಾಳಿ ಮತ್ತು ಬಾಂಬ್ ಸ್ಫೋಟಗಳು ಸೇರಿದಂತೆ ಸುಮಾರು 400 ದಾಳಿಗಳು ನಡೆದವು. ಮತದಾರರನ್ನು ಬೆದರಿಸುವುದು ಈ ದಾಳಿಗಳ ಉದ್ದೇಶವಿದ್ದಂತಿತ್ತು. ಕೆಲವು ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾಣೆಯಾಗಿದೆ ಎಂದು ಹೇಳಿದ್ದು ಮತದಾನದ ನಡವಳಿಕೆಯಲ್ಲಿನ ತೊಂದರೆಗಳು ಸ್ಪಷ್ಟವಾಗಿವೆ. ಅಧ್ಯಕ್ಷೀಯ ಘಾನಿಯೊಂದಿಗೆ ಅಧಿಕಾರ ಹಂಚಿಕೊಂಡ ಹಾಲಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಹಾಲಿ ಮುಖ್ಯ ಕಾರ್ಯನಿರ್ವಾಹಕ ಡಾ. ಅಬ್ದುಲ್ಲಾ ಅಬ್ದುಲ್ಲಾ ಇಬ್ಬರು ಪ್ರಮುಖ ಅಧ್ಯಕ್ಷೀಯ ಸ್ಪರ್ಧಿಗಳಾಗಿದ್ದಾರೆ. 2014 ರಲ್ಲಿ ನಡೆದ ಚುನಾವಣೆ ವಿವಾದಾತ್ಮಕವಾಗಿದ್ದು ಅದು ಮತ ಚಲಾಯಿಸಿದ ಶೇಕಡಾ ನೂರು ಲೆಕ್ಕಪರಿಶೋಧನೆಗೆ ಕಾರಣವಾಯಿತು. ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಅವಕಾಶ ಕಲ್ಪಿಸಲು ರಾಜಿ ಸೂತ್ರವನ್ನು ರೂಪಿಸಲಾಯಿತು.

2001 ರಿಂದ, ಅಫ್ಘಾನಿಸ್ತಾನವು ಚುನಾಯಿತ ಸಂಸತ್ತಿನೊಂದಿಗೆ ಅಧ್ಯಕ್ಷೀಯ ಸರ್ಕಾರದ ರೂಪವನ್ನು ಸ್ಥಾಪಿಸಿದೆ. ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ಈ ವ್ಯವಸ್ಥೆಯನ್ನು ತಾಲಿಬಾನ್ ವಿರೋಧಿಸಿದೆ. ಇದು ಕಾಬೂಲ್‌ನಲ್ಲಿನ ಸರ್ಕಾರವನ್ನು ‘ಯುನೈಟೆಡ್ ಸ್ಟೇಟ್ಸ್‌ನ ಕೈಗೊಂಬೆ’ ಎಂದು ವಿವರಿಸುತ್ತದೆ ಮತ್ತು ಅದರೊಂದಿಗೆ ಯಾವುದೇ ಸಂವಾದ ನಡೆಸಲು ನಿರಾಕರಿಸಿದೆ. ತಾಲಿಬಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸರಣಿ ಮಾತುಕತೆಗಳನ್ನು ದೋಹಾದ ತಾಲಿಬಾನ್ ಕಚೇರಿಯ ಮೂಲಕ ನಡೆಸಲಾಯಿತು. ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಮಾತುಕತೆಯ ಹೊರತಾಗಿ, ತಾಲಿಬಾನ್ ಪ್ರತಿನಿಧಿಗಳು ಭಾಗವಹಿಸಿದ ಹಲವಾರು ಇತರ ಕಾರ್ಯಕ್ರಮಗಳು ನಡೆದಿವೆ.

ಯಾವುದೇ ಮಾತುಕತೆಗೆ ಮುಂಚಿತವಾಗಿ ಅಫ್ಘಾನಿಸ್ತಾನದಲ್ಲಿ ವಿದೇಶಿ ಸೈನ್ಯ ನಿರ್ಗಮಿಸ ಬೇಕು ಎಂದು ತಾಲಿಬಾನ್ ಬಯಸಿತ್ತು. ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ, ಅದು ಮಾತುಕತೆಗೆ ನಿರ್ಧರಿಸಿದೆ. ದಂಗೆಕೋರರ ಗುಂಪು ಬಾಲಕಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳಿಗೆ ತಕ್ಕಂತೆ ತನ್ನನ್ನು ತಾನು ನಿರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಕಾಬೂಲ್‌ನಲ್ಲಿನ ನ್ಯಾಟೋನ ‘ರೆಸೊಲ್ಯೂಟ್ ಸಪೋರ್ಟ್ ಮಿಷನ್’ ಕೇಂದ್ರ ಕಚೇರಿಯ ಮೇಲೆ ಕಾರ್ ಬಾಂಬ್ ದಾಳಿಯ ನಂತರ ತಾಲಿಬಾನ್ ಜೊತೆಗಿನ ಮಾತುಕತೆಯನ್ನು ಯುಎಸ್ ರದ್ದುಗೊಳಿಸಿದ ನಂತರ, ಅಫ್ಘಾನಿಸ್ತಾನದಲ್ಲಿ ಶಾಂತಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆಯು ದೊಡ್ಡದಾಗಿದೆ. ಈ ಸನ್ನಿವೇಶದಲ್ಲಿ, ನಡೆದ ರಾಷ್ಟ್ರಪತಿ ಚುನಾವಣೆಯು ನಿರ್ಣಾಯಕವಾಗಿದೆ ಏಕೆಂದರೆ ಅದು ಧ್ವಂಸಗೊಂಡ ದೇಶದಲ್ಲಿ ಒಟ್ಟಾರೆ ಶಾಂತಿಗೆ ಪ್ರಮುಖವಾಗಿದೆ.

ಕಳಪೆ ಮತದಾನ ಪ್ರಮಾಣವು ಸರ್ಕಾರ ರಚನೆಗೆ ಕರಿನೆರಳಾಗುವ ಸಾಧ್ಯತೆಯಿದೆ. ಇಷ್ಟು ಕಡಿಮೆ ಮತದಾರರ ಜೊತೆ ಚುನಾವಣೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಲು ತಾಲಿಬಾನ್ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈಗಾಗಲೇ, ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರ ಬೆಂಬಲಿಗರು ಈ ಚುನಾವಣೆಯನ್ನು ಕಳೆದ ಬಾರಿಯಂತೆ ತಿರುಚಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್ ಮೂರನೇ ವಾರದಲ್ಲಿ ಪ್ರಕಟವಾಗಲಿರುವ ಚುನಾವಣಾ ಫಲಿತಾಂಶವು ಎಲ್ಲಾ ಪಕ್ಷಗಳಿಗೆ ಸ್ವೀಕಾರಾರ್ಹವಾಗಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸಾಂಸ್ಥಿಕ ಚೌಕಟ್ಟಿನ ನಿರಂತರತೆಯು ಅತ್ಯಂತ ಮಹತ್ವದ್ದಾಗಿರುವುದರಿಂದ ಚುನಾವಣಾ ಫಲಿತಾಂಶಗಳು ಅಫ್ಘಾನಿಸ್ತಾನಕ್ಕೆ ಹೊಸ ಪ್ರಯಾಣವನ್ನು ಸೂಚಿಸಬೇಕು. ಚುನಾವಣೆಗಳನ್ನು ಹೊರತುಪಡಿಸಿ ಪ್ರಜಾಪ್ರಭುತ್ವಕ್ಕೆ ನಿರಂತರತೆಯನ್ನು ಒದಗಿಸಲು ಬೇರೆ ದಾರಿಯಿಲ್ಲ. ಅಫ್ಘಾನಿಸ್ತಾನದ ಪುನರ್ನಿರ್ಮಾಣದ ವಿಶೇಷ ಇನ್ಸ್‌ಪೆಕ್ಟರ್ ಜನರಲ್ ವರದಿಯ ಪ್ರಕಾರ, ಶೇಕಡಾ 56 ರಷ್ಟು ಪ್ರದೇಶವು ತಾಲಿಬಾನ್ ನಿಯಂತ್ರಣದಲ್ಲಿದೆ. ಹೊಸ ಸರ್ಕಾರವು ದೇಶದ ಮೇಲೆ ತನ್ನ ‘ರಿಟ್’ ಅನ್ನು ಜಾರಿಗೆ ತರಲು ಮುಂದೆ ಸವಾಲಿನ ಕೆಲಸವನ್ನು ಹೊಂದಿರುತ್ತದೆ.

ಬರಹ: ಡಾ. ಸ್ಮೃತಿ ಎಸ್ ಪಾಟ್ನಾಯಕ್, ದಕ್ಷಿಣ ಏಷ್ಯಾದ ವ್ಯೂಹಾತ್ಮಕ ವಿಶ್ಲೇಷಕ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ