ಇಮ್ರಾನ್ ಗೆ ಹೆಚ್ಚಿದ ಸಮಸ್ಯೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಎರಡು ದಿನಗಳ ಚೀನಾ ಪ್ರವಾಸದಲ್ಲಿದ್ದರು. ಪಾಕ್ ಸೈನ್ಯದ ಮುಖ್ಯ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಖಾನ್ ಅವರ ಭೇಟಿಗೆ ಒಂದು ದಿನ ಮುಂಚಿತವಾಗಿ ಬೀಜಿಂಗ್ ತಲುಪಿದ್ದರು. ಚೀನಾ ಸೇನಾ ಮುಖ್ಯಸ್ಥ ಜನರಲ್ ಜಾಂಗ್ ಯೂಕ್ಸಿಯಾ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಉನ್ನತ ಮಿಲಿಟರಿ ಅಧಿಕಾರಿಗಳನ್ನು ಬಾಜ್ವಾ ಭೇಟಿ ಮಾಡಿದರು. ಜನರಲ್ ಬಜ್ವಾ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ಲಿ ಕೆಕಿಯಾಂಗ್ ಅವರೊಂದಿಗಿನ ಸಭೆಗಳಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಸೇರಿಕೊಂಡರು. ವಿಶೇಷವೆಂದರೆ, ಇದು ಒಂದು ವರ್ಷದೊಳಗೆ ಇಮ್ರಾನ್ ಖಾನ್ ಅವರ ಚೀನಾಕ್ಕೆ ಮೂರನೇ ಬಾರಿ ಭೇಟಿ ಆಗಿದೆ.

"ಹೊಸ ಯುಗದಲ್ಲಿ ಸಹಕಾರದ ಭವಿಷ್ಯದ ಸಮುದಾಯ" ವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ "ಪಾಕಿಸ್ತಾನ-ಚೀನಾ ಆಲ್-ವೆದರ್ ಸ್ಟ್ರಾಟೆಜಿಕ್ ಕೋಆಪರೇಟಿವ್ ಪಾರ್ಟ್‌ನರ್‌ಶಿಪ್" ಯೋಜನೆಯನ್ನು ಮತ್ತಷ್ಟು ಬಲಪಡಿಸುವ "ಭೇಟಿಯ ಜಂಟಿ ಹೇಳಿಕೆಯು ಉಭಯ ದೇಶಗಳ ದೃಢ ಸಂಕಲ್ಪವನ್ನು ಪುನರುಚ್ಚರಿಸಿತು.

ಸಾಕಷ್ಟು ನಿರೀಕ್ಷೆಯಂತೆ, ಈ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅಂಶವು ಕೂಡ ಇದೆ. ಯುಎನ್ ನಿರ್ಣಯಗಳ ಬಗ್ಗೆ ಪಾಕಿಸ್ತಾನವನ್ನು ತೃಪ್ತಿಪಡಿಸಿದರೂ, ಚೀನಾವು ಬಹುಶಃ ಅದನ್ನು ಕಾರ್ಯಗತಗೊಳಿಸಲಾಗದು ಎಂದು ಪಾಕ್ ಗೆ ತಿಳಿದಿದೆ. ಆದರೂ, ಬೀಜಿಂಗ್ ಭಾರತದೊಂದಿಗೆ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಪರಿಹರಿಸಲು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಮುಖ್ಯವಾಗಿ ಇಮ್ರಾನ್ ಅವರ ಭೇಟಿ ಚೀನಾದ ಅಧ್ಯಕ್ಷರ ಭಾರತ ಭೇಟಿ ಮತ್ತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಸಭೆಗೆ ಕೆಲವೇ ದಿನಗಳ ಮೊದಲು ನಡೆದಿದ್ದು, ಅದು ಪಾಕಿಸ್ತಾನವು ತನ್ನದೇ ಆದ ಬದ್ಧತೆಗಳನ್ನು ಅನುಸರಿಸುವುದನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅದನ್ನು ‘ಬೂದು’ ಪಟ್ಟಿಯಿಂದ ‘ಕಪ್ಪು’ ಪಟ್ಟಿಗೆ ತಳ್ಳಲಾಗುತ್ತದೆಯೇ ಎಂದು ನಿರ್ಧರಿಸುತ್ತದೆ. ಚೀನಾದ ಉನ್ನತ ನಾಯಕತ್ವದೊಂದಿಗಿನ ಅವರ ಸಭೆಗಳಲ್ಲಿ, ಪ್ರಧಾನಿ ಖಾನ್ ಮತ್ತು ಜನರಲ್ ಬಜ್ವಾ ಇಬ್ಬರೂ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಾರೆ ಮತ್ತು ಉಭಯ ದೇಶಗಳು ಇನ್ನೂ ಒಂದೇ ಅಭಿಪ್ರಾಯ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ನಿರೀಕ್ಷಿಸುವುದು ಸಹಜ. ಆದರೆ, ಮಾಮಲ್ಲಾಪುರದಲ್ಲಿ ಪ್ರಧಾನಿ ಮೋದಿಯವರೊಂದಿಗೆ ನಡೆದ ಅನೌಪಚಾರಿಕ ಶೃಂಗಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಅವರು ಕಾಶ್ಮೀರ ವಿಷಯವನ್ನು ಕೈಗೆತ್ತಿಕೊಳ್ಳಲಿಲ್ಲ.

ಆದಾಗ್ಯೂ, ಯುಎನ್‌ಜಿಎದಲ್ಲಿ ಖಾನ್ ಅವರ ಭಾಷಣ ಮತ್ತು ಅವರ ಚೀನಾ ಭೇಟಿಗೆ ಪಾಕ್ ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಪಾಕಿಸ್ತಾನದ ಹೆಚ್ಚಿನ ವ್ಯಾಖ್ಯಾನಕಾರರು ತಮ್ಮ ಮೌಲ್ಯಮಾಪನದಲ್ಲಿ ವಾಸ್ತವಿಕ ನಿಲುವು ಹೊಂದಿದ್ದರು. ಪಾಕಿಸ್ತಾನದಲ್ಲಿ ಇಮ್ರಾನ್ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ, ಭಾರತೀಯ ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಹಿಂತೆಗೆದುಕೊಳ್ಳುವ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮರುಸಂಘಟಿಸುವ ಭಾರತೀಯ ನಿರ್ಧಾರದ ಮೇಲೆ ಅವರು ಮಾಡಿದ ಪ್ರಯತ್ನಗಳ ಒಟ್ಟಾರೆ ಪರಿಣಾಮ ಶೂನ್ಯವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಿಂದೆ ಜುಲ್ಫಿಕರ್ ಅಲಿ ಭುಟ್ಟೋ, ಬೆನಜೀರ್ ಭುಟ್ಟೋ ಮತ್ತು ನವಾಜ್ ಷರೀಫ್ ಅವರು ಕಾಶ್ಮೀರದ ಬಗೆಗಿನ ಭಾರತೀಯ ವಿಧಾನದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಇಂತಹ ಭಾಷಣಗಳನ್ನು ಮಾಡಿದ್ದರು ಎಂದು ಹೇಳುವ ಇತರರು ಇದ್ದರು. ವಿಕಸನಗೊಳ್ಳುತ್ತಿರುವ ಜಾಗತಿಕ ಕಾರ್ಯತಂತ್ರದ ಭೂದೃಶ್ಯದ ಬಗ್ಗೆ ಒಂದು ಗಂಭೀರವಾದ ಮೌಲ್ಯಮಾಪನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೌಲ್ಯ ಹೆಚ್ಚಿದೆ.

ಪಾಕಿಸ್ತಾನದ ರಾಜಕೀಯದಲ್ಲಿ ಭಾರತದ ನಡೆ ಇಮ್ರಾನ್ ಖಾನ್ ರನ್ನು ಚಿಂತಿತಗೊಳಿಸಿದೆ. ಜನರೂ ಎಚ್ಚರಗೊಳ್ಳುತ್ತಿದ್ದಾರೆ. ಇದು ಇಮ್ರಾನ್ ರನ್ನು ಕೆಳಗಿಳಿಸಲು ಪ್ರತಿಪಕ್ಷಗಳಿಗೆ ಆಸ್ತ್ರ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಕ್ರಮವನ್ನು ನಿರೀಕ್ಷಿಸಲು ಸಾಧ್ಯವಾಗದ ಕಾರಣ ಅವರ ರಾಜಕೀಯ ಅಪ್ರಬುದ್ಧತೆ ಮತ್ತು ಅಸಮರ್ಥತೆಯನ್ನು ವಿಪಕ್ಷಗಳು ಬೊಟ್ಟು ಮಾಡುತ್ತಿವೆ. "ಇಮ್ರಾನ್ ಖಾನ್ ಕೇವಲ ಕೈಗೊಂಬೆಯಾಗಿದ್ದು, ಇತರರ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ" ಎಂದು ಹೇಳುವ ಮೂಲಕ ಬಿಲಾವಾಲ್ ಭುಟ್ಟೋ ಅವರು ಖಾನ್ ಮತ್ತು ಅವರ ಪ್ರೇರಿತ ಮಾರ್ಗದರ್ಶಕರನ್ನು (ಸೈನ್ಯ) ಟೀಕಿಸಿದ್ದಾರೆ. ಮೌಲಾನಾ ಫಜಲೂರ್ ರೆಹಮಾನ್ ಇಸ್ಲಾಮಾಬಾದ್‌ಗೆ ತಮ್ಮ ಸುದೀರ್ಘ ರಾಲಿ ನಡೆಸಲು ಸಜ್ಜಾಗಿದ್ದು, ಇಮ್ರಾನ್ ಅವರ ನೀತಿಗಳ ಅಸಮಾಧಾನದ ಮೇಲೆ ರಾಜಕೀಯ ಲಾಭಾಂಶವನ್ನು ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಆದಾಯ ಸಂಗ್ರಹಣೆ ಮತ್ತು ಹೂಡಿಕೆಗಳ ದರದಿಂದ ಖಾನ್ ಸರ್ಕಾರವು ಬಿಕ್ಕಟ್ಟು ಎದುರಿಸುತ್ತಿದೆ. ಜಾಗತಿಕ ಮಾರುಕಟ್ಟೆ ಸಂಶೋಧನೆ ಮತ್ತು ಸಲಹಾ ಸಂಸ್ಥೆಯ ಇತ್ತೀಚಿನ ಸಮೀಕ್ಷೆ - ಪಾಕಿಸ್ತಾನದ ಆರ್ಥಿಕತೆಯ ಬಗ್ಗೆ ಜನರ ವಿಶ್ವಾಸ ಕ್ಷೀಣಿಸುತ್ತಿದೆ ಎಂದು ತೋರಿಸಿದೆ. ಪಾಕಿಸ್ತಾನದ ಸ್ಕೋರ್ ಭಾರತಕ್ಕೆ 62.9 ಕ್ಕೆ ಹೋಲಿಸಿದರೆ 33.8 ರಷ್ಟಿದೆ. ಸುಮಾರು 79 ಪ್ರತಿಶತದಷ್ಟು ಜನರು ಪಾಕಿಸ್ತಾನವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.

ಇಮ್ರಾನ್ ಅವರ ಕ್ಷೀಣಿಸುತ್ತಿರುವ ಜನಪ್ರಿಯತೆಯಲ್ಲಿ, ಪಾಕ್ ವಿಪಕ್ಷಗಳು ತನ್ನ ರಾಜಕೀಯ ಅದೃಷ್ಟದ ಪುನರುಜ್ಜೀವನವನ್ನು ನಿರೀಕ್ಷಿಸುತ್ತಿವೆ. ಬಿಲವಾಲ್ ಮತ್ತು ನವಾಜ್ ಷರೀಫ್ ಇಬ್ಬರೂ ಇಮ್ರಾನ್ ಖಾನ್ ಅವರನ್ನು ಮತ್ತಷ್ಟು ವಿರೋಧಿಸಲು ಮತ್ತು ಮಿಲಿಟರಿಯೊಂದಿಗಿನ ಅವರ ಸಂಬಂಧದ ಬಲವನ್ನು ಪರೀಕ್ಷಿಸಲು ಫಜಲೂರ್ ರಹಮಾನ್ ಅವರ ರಾಲಿಯನ್ನು ಸದ್ದಿಲ್ಲದೆ ಅನುಮೋದಿಸುತ್ತಿದ್ದಾರೆ.

ಲೇಖನ : ಡಾ. ಅಶೋಕ್ ಬೇಹುರಿಯಾ, ಸೀನಿಯರ್ ಫೆಲೋ, ಕೋ ಆರ್ಡಿನೇಟರ್, ಸೌತ್ ಏಷ್ಯಾ ಸೆಂಟರ್, ಐಡಿಎಸ್ಎ

Comments

Popular posts from this blog

ಆಲಿಪ್ತ ದೇಶಗಳ ಮುಂದಿರುವ ಸವಾಲು

ಬಿರುಸುಗೊಂಡ ಯುಸ್ ಅಧ್ಯಕ್ಷೀಯ ಚುನಾವಣೆ

ಸಿಪಿಇಸಿ: ಪಾಕಿಸ್ತಾನಕ್ಕೆ ಸಾಲದ ಹೊರೆ